ನನಗಿವತ್ತೂ ಚಂದ್ರದರ್ಶನವಾಗಿಲ್ಲ….

ದರ್ಶನ!

ಬಿ ಎಂ ಬಶೀರ್


ಇಫ್ತಾರಿನ ಹೆಸರಲ್ಲಿ
ಚೆಲ್ಲಿ ಹೋದ ಮೃಷ್ಟಾನ್ನದ ಅಗುಳುಗಳು
ಇನ್ನೂ ಮೋರಿಯಲ್ಲಿ ತೇಲುತ್ತಿವೆ
ಹಬ್ಬಕ್ಕೆಂದು ಕೊಂಡ
ಗರಿಗರಿಯಾದ ಹೊಸ ಕರವಸ್ತ್ರದಲ್ಲಿ
ಅಷ್ಟೂ ಕಣ್ಣುಗಳ ಕಣ್ಣೀರು ಹೇಗೆ ಒರೆಸಲಿ?
ನನ್ನ ಚೀಲದೊಳಗಿರುವ ಅಕ್ಕಿ
ನೆರೆಯವನ ಹಸಿವಿನ ಚೀಲ
ತುಂಬಲು ಸಾಲುತ್ತಿಲ್ಲ
ಹಸಿದವನು ರೊಟ್ಟಿಯ ಚೂರಿಗೆ
ತಡಕಾಡುವಂತೆ
ಕತ್ತಲು ಕವಿದ ಆಕಾಶದಲ್ಲಿ
ಚಂದಿರನ ಚೂರಿಗಾಗಿ ತಡಕಾಡುತ್ತಿರುವೆ
ನನಗಿವತ್ತೂ ಚಂದ್ರದರ್ಶನವಾಗಿಲ್ಲ….!!
 

‍ಲೇಖಕರು G

July 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Anonymous

    ಬಹಳ ಮಾರ್ಮಿಕವಾದ ಸಾಲುಗಳು.;ಮನಮುಟ್ಟಿತು.

    ಪ್ರತಿಕ್ರಿಯೆ
  2. yash

    ಚೆಲ್ಲಿ ಹೋದ ಮೃಷ್ಟಾನ್ನದ ಅಗುಳುಗಳು
    ಇನ್ನೂ ಮೋರಿಯಲ್ಲಿ ತೇಲುತ್ತಿವೆ…. ಮನಮುಟ್ಟಿದ ಸಾಲು.

    ಪ್ರತಿಕ್ರಿಯೆ
  3. hajarat ali deginal

    ಹಸಿದ ಹೊಟ್ಟೆಗಳು ತುತ್ತು ಅನ್ನಕ್ಕಾಗಿ ಒದ್ದಾಡುವ ಈ ಸಮಯದಲ್ಲಿ ಅನ್ನವನ್ನು ಚಲ್ಲಾಡುತ್ತಿರುವ ಜನರಿಗೆ ನಿಮ್ಮ ಕವಿತೆ ಬಾರಕೋಲೇಟು ಕೊಡುತ್ತದೆ.ಬೇಂದ್ರೆಯವರ ಅನ್ನಯಜ್ಞ ಕವಿತೆಯ ಭಾವವೇ ನಿಮ್ಮ ಕವಿತೆಯಲ್ಲಿ ಹೊಸದಾಗಿ ಬಂದಿದೆ.ಧನ್ಯವಾದಗಳು ಬಶಿರ ಸರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: