ದರ್ಶನ!
ಬಿ ಎಂ ಬಶೀರ್
ಇಫ್ತಾರಿನ ಹೆಸರಲ್ಲಿ
ಚೆಲ್ಲಿ ಹೋದ ಮೃಷ್ಟಾನ್ನದ ಅಗುಳುಗಳು
ಇನ್ನೂ ಮೋರಿಯಲ್ಲಿ ತೇಲುತ್ತಿವೆ
ಹಬ್ಬಕ್ಕೆಂದು ಕೊಂಡ
ಗರಿಗರಿಯಾದ ಹೊಸ ಕರವಸ್ತ್ರದಲ್ಲಿ
ಅಷ್ಟೂ ಕಣ್ಣುಗಳ ಕಣ್ಣೀರು ಹೇಗೆ ಒರೆಸಲಿ?
ನನ್ನ ಚೀಲದೊಳಗಿರುವ ಅಕ್ಕಿ
ನೆರೆಯವನ ಹಸಿವಿನ ಚೀಲ
ತುಂಬಲು ಸಾಲುತ್ತಿಲ್ಲ
ಹಸಿದವನು ರೊಟ್ಟಿಯ ಚೂರಿಗೆ
ತಡಕಾಡುವಂತೆ
ಕತ್ತಲು ಕವಿದ ಆಕಾಶದಲ್ಲಿ
ಚಂದಿರನ ಚೂರಿಗಾಗಿ ತಡಕಾಡುತ್ತಿರುವೆ
ನನಗಿವತ್ತೂ ಚಂದ್ರದರ್ಶನವಾಗಿಲ್ಲ….!!
sir, kavithe chennaagide
ಬಹಳ ಮಾರ್ಮಿಕವಾದ ಸಾಲುಗಳು.;ಮನಮುಟ್ಟಿತು.
ಚೆಲ್ಲಿ ಹೋದ ಮೃಷ್ಟಾನ್ನದ ಅಗುಳುಗಳು
ಇನ್ನೂ ಮೋರಿಯಲ್ಲಿ ತೇಲುತ್ತಿವೆ…. ಮನಮುಟ್ಟಿದ ಸಾಲು.
sir kavithe chennagide
ಹಸಿದ ಹೊಟ್ಟೆಗಳು ತುತ್ತು ಅನ್ನಕ್ಕಾಗಿ ಒದ್ದಾಡುವ ಈ ಸಮಯದಲ್ಲಿ ಅನ್ನವನ್ನು ಚಲ್ಲಾಡುತ್ತಿರುವ ಜನರಿಗೆ ನಿಮ್ಮ ಕವಿತೆ ಬಾರಕೋಲೇಟು ಕೊಡುತ್ತದೆ.ಬೇಂದ್ರೆಯವರ ಅನ್ನಯಜ್ಞ ಕವಿತೆಯ ಭಾವವೇ ನಿಮ್ಮ ಕವಿತೆಯಲ್ಲಿ ಹೊಸದಾಗಿ ಬಂದಿದೆ.ಧನ್ಯವಾದಗಳು ಬಶಿರ ಸರ