ನಂದಿನಿ ಹೆದ್ದುರ್ಗ ಹೊಸ ಕವಿತೆ- ‘ಮಳೆ ಬಂತಾ’

ನಂದಿನಿ ಹೆದ್ದುರ್ಗ

—-

‘ಮಳೆ ಬಂತಾ’

ಮಾತಿನ ಆರಂಭಕ್ಕೆ ಎಲ್ಲರೂ

ಬಳಸುವ ಮಾಮೂಲಿ

ಪ್ರಶ್ನೆಯನ್ನೇ ಕೇಳುವುದು ನಾವು

ನಾನೊಂದು ಕೊಂಕು

ನುಡಿಯಲಿ ಎನ್ನುವ ಬೆಟ್ಟದಷ್ಟು 

ಆಸೆಯಲ್ಲಿರುವ ಅವನು

ನೀನಿದ್ದ ಕಡೆ ಮಳೆ ಬೆಳೆ

ಕ್ಷೇಮ ಸೌಖ್ಯಗಳು

ಇರಲೇಬೇಕಲ್ಲವೆ ಎನ್ನಲಿ

ಎನ್ನುವ ನಿರೀಕ್ಷೆಯಲ್ಲಿ ನಾನು

ಮಾತು ಮುಂದುವರೆಸುತ್ತೇವೆ

ಮಗಳು…ಮಗ…ಕ್ಷೇಮ..ಸೌಖ್ಯ

ಈ ನಡುವೆ ಹೊಸದಾಗಿ

ಕಲಿತಿರುವ ಕಿವಿ ತುರಿಸಿಕೊಳ್ಳುವ

ಚಾಳಿಯನ್ನು ಮತ್ತೆಮತ್ತೆ ಮಾಡಿ

ಕಿರಿಕಿರಿ ಹುಟ್ಟಿಸುತ್ತಾನೆ ಅವನು

ನಿಷ್ಠೆಯ ಕುರಿತು

ಭಾಷಣ ಮಾಡುತ್ತಲೇ ವಂಚಿಸಿ 

ಸದ್ಯ ಅಂಟಿಕೊಂಡಿರುವ

ಅವಳ ಕುರಿತು ತುಟಿತುದಿಯಲ್ಲಿ

ಕುಂತ ಪ್ರಶ್ನೆಯೊಂದನ್ನು

ಹಾಗೇ ನುಂಗುತ್ತೇನೆ ನಾನು

ಅವನ ರೆಪ್ಪೆಗಳು

ಬಾಗಿರುವುದು ನನಗಿಷ್ಟ ಅಂತಲೂ

ನನ್ನ ಬೈತಲೆಗೆ ಎದುರಾದ

ಒಂದೆಳೆ ಹೆರಳನ್ನು ಸರಿಸುವುದಕ್ಕೆ

ಅವನಿಗಾಸೆ ಅಂತಲೂ

ಹೇಳಿಕೊಳ್ಳದೆ

ನಮ್ಮ ವಿದಾಯ‌ದ ನುಡಿಗಳು

ಮುಂದಿನ ನಡೆಗಾಗಿ ತಾಲೀಮು ನಡೆಸುತ್ತವೆ

‍ಲೇಖಕರು avadhi

November 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಮಠ ಕೊಟ್ರೇಶ್ ತಂಬ್ರಳ್ಳಿ ಅಮರಗೋಳ

    ಇಷ್ಟವಾಯಿತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: