ನಂದಿನಿ ಹೆದ್ದುರ್ಗ ಹೊಸ ಕವಿತೆ – ಅವಳ ಕಳೆದ ಉಂಗುರ…

ನಂದಿನಿ ಹೆದ್ದುರ್ಗ

ಕಂಪಿಸಿ
ಕಳಿಸಿದ ಸಂದೇಶವೊಂದು
ಅವನ
ನೋಟದ ನಂಜುಂಡು
ನೀಲಿಯಾಗಲು
ಕಾದು ಕನಲುತ್ತಿದೆ ಗೆಳತಿ

ಕಂಬನಿ ತುಂಬಿಕೊಂಡ
ಮುದ್ದು ಗೊಂಬೆಯಂತವಳು
ಹಠ ಹಿಡಿದು
ಭೀಕರ ನೋವಿನ
ಶಿಖರವೇರುತ್ತಿರುವಳು

ಹೊಡೆವ ಥಂಡಿಗೆ
ಮೈ
ಕೊರಡಾಗಬಹುದು
ಮನಸ್ಸು
ಬರಡಾಗಬಹುದು
ಕಾಯದಿರಲು ಹೇಳು
ಮನೆಯವರಿಗೆ

ಅವಳ
ಕಳೆದ ಉಂಗುರವೀಗ
ಮೀನಿನ
ಒಡಲಲ್ಲಿಲ್ಲ
ಕೊಳದ ತಳದಲ್ಲಿಲ್ಲ
ಅವನೆದೆಯ
ತಿಳಿವಲ್ಲೂ ಇಲ್ಲ

ಆ ಅಂಗಳಕೆ ಬರುವ
ಖಾಲಿ ಸಂಜೆಗಳಲಿ
ಕಂಡ ಹೊಂಗನಸ ಕುರುಹಿಲ್ಲ
ಉದುರಿದ ಹೂಪಕಳೆಗಳ
ಬೆಳಕಿಗೆ ಅವನ ಗಂಧವಿಲ್ಲ

ಗೆಳತಿ
ಕಾಲ ಕಾಲಕ್ಕೂ
ಇಲ್ಲಿ ಶಕುಂತಲೆಯರೇ
ಮತ್ತೆಮತ್ತೆ
ಹುಟ್ಟುವುದು.
ಇದು ಕಾರಣ…
ದುಷ್ಯಂತರನ್ನು
ದುರುಳರೆನ್ನಬಾರದಲ್ಲವೇ
ನಾವು?

‍ಲೇಖಕರು Admin

January 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: