-ಲಡಾಯಿ ಬಸು
೧
ಕತ್ತಲಲ್ಲಿ ಹಣತೆ ಹಚ್ಚುವ ದಡ್ದತನವಷ್ಟೇ ಜತೆಯಲ್ಲಿತ್ತು
ಬೆಳಕಿನ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುವುದು ನನಗೊಲಿಯಲಿಲ್ಲ
೨
ಅನಾಮಿಕ ಹಗಲಿನ ಸಮಯ ಮುಗಿದು ಹೇಗೋ ಸಂಜೆಯಾಗಿದೆ
ಆದ ಗಾಯವೇ ಮಾಯ್ದಿಲ್ಲ ಇನ್ನೊಂದಕ್ಕೆ ತಯಾರಾಗು ಅಂದರೆ ಹೇಗೆ ..?
೩
ಪಯಣದ ಹಾದಿಯಲಿ ಯಾರೋ ಇಳಿದು ಹೋದಾಗ ಬರದ ದುಃಖ
ಇಳಿದು ಹೋದವರು ಒಳಗೆ ಉಳಿದಾಗ ಉಮ್ಮಳಿಸಿತು
೪
ದಡದ ಮೇಲೆ ಕುಳಿತ ಕಪ್ಪೆ
ಕಲ್ಲುಬಿದ್ದು ಸದ್ದಾದ ಬಾವಿಗೇ ಹಾರುವುದು
೫
ಹೀಗೊಮ್ಮೆ ಬೆಳಕಿನ ಹೆಸರಿನವಳ ಬೆನ್ನಟ್ಟಿ ಹೊರಟ್ಟಿದ್ದೆ ನಾನು
ಒಂದು ಸಲ ಹಿಂತಿರುಗಿ ನೋಡಿದೆ ಬೆನ್ನ ಹಿಂದೆಯೇ ಕತ್ತಲಿತ್ತು
೬
ನೀನು ಹಚ್ಚಿದ್ದು ಒಂದೇ ಮೊಂಬತ್ತಿ
ಈ ರಾತ್ರಿಗಳೆಯಲು ಬೇಕಿದ್ದ ಬೆಳಕೂ ಅಷ್ಟೇ
೭
ನಿನ್ನೂರಿನಲ್ಲಿ ಬೆಳಗಾಗಿತ್ತು
ನನ್ನೂರಿನಲ್ಲಿ ಸೂರ್ಯ ಮುಳುಗಿದ್ದು ಹೆಚ್ಚು ಕಾಡಲಿಲ್ಲ
೮
ಕುಡಿ ಹಿಡಿದ ಹಣತೆ ಬಗ್ಗೆ ಏನು ಮಾತು ..?
ಒಣಗಿದ ಬತ್ತಿಯನು ಎಣ್ಣೆಯಿಂದ ಹಸಿ ಮಾಡದ ಮೇಲೆ ..
೯
ಮೇಲೇರುತ್ತ ನಡೆದಂತೆಲ್ಲ ಸೂರ್ಯನ ರೂಪವೇ ಸಣ್ಣದಾಯಿತು
ಮತ್ತೇನು ಪ್ರಿತಿಯಿತ್ತ ಭೂಮಿಯನ್ನೇ ಎಣಿಯಾಗಿಸಿದನು ನೋಡಿ
೧೦
ಕೊಳ್ಳುಬಾಕರ ಅಗಸಿಯಲ್ಲಿ ಹಾಯ್ದು ಬಂದೆ
ಬೆಳಕಾದ ಸೂರ್ಯನಿಗೆ ಬೆಲೆ ಎಷ್ಟೆಂದು ಕೇಳುವ ಮನಸಾಯಿತು ..





Tumba chennagide
ಸುಂದರ, ಮನತಟ್ಟಿದ ದ್ವಿಪದಿಗಳು. ತುಂಬಾ ಇಷ್ಟವಾದವು… ಅದರಲ್ಲೂ “ನೀನು ಹಚ್ಚಿದ್ದು ಒಂದೇ ಮೊಂಬತ್ತಿ
ಈ ರಾತ್ರಿಗಳೆಯಲು ಬೇಕಿದ್ದ ಬೆಳಕೂ ಅಷ್ಟೇ” – ದ್ವಿಪದಿ ತುಂಬಾ ಆಪ್ತವೆನಿಸಿತು!
ESTU AAPTA ENDARE KANNU TUMBUVASHTU
chennaagive!
Liked it..
ಎಲ್ಲರಿಗೂ ಧನ್ಯವಾದಗಳು…..