’ದಿರಿಸು ಧರಿಸಿದ ಮಾತ್ರಕ್ಕೆ ನೀನು ನಾನಾಗುವಂತಿದ್ದರೆ…’

ಮಗನಿಗೊಂದು ಪತ್ರ

ವಾಸುದೇವ ನಾಡಿಗ್

ಮಗಾ ,
ಹಗಲಿರುಳುಗಳದೆಷ್ಟು ಹಾದುಹೋದವು
ಹಾದುಹೋಗುವುದಕ್ಕೆ ಇರುವ ಕಾಲ ತೊರೆ
ಇದೇ ಹಾದಿಯಲಿ ನಾನು ಕೊನೆಗೊಂಡ ದಿನ
ಹಾದಿಗಳ ತುಳಿಯುವುದು ನಿನ್ನ ಸರದಿ
ಅದೆಷ್ಟು ಮುಗುಮ್ಮಾಗಿ ನನ್ನ ಚಪ್ಪಲಿ ಶೂ
ಅಂಗಿ ಕೋಟಿನ ಒಳಗೆ ನೀನು ತೂರಿಹೋಗುತ್ತಿ
ಚಪ್ಪಲಿಯ ಅಳತೆಯಂತಲ್ಲ ಈ ಬದುಕು
ದಿರಿಸು ಧರಿಸಿದ ಮಾತ್ರಕ್ಕೆ ನೀನು
ನಾನಾಗುವಂತಿದ್ದರೆ
ಅಜ್ಜಂದಿರೆಂದೂ ತಿರೆಯ ತೊರೆಯುತ್ತಿರಲಿಲ್ಲ

 
ನನ್ನೆದೆಯ ಮೇಲೆ ಎದ್ದಾಡಿ ಗುದ್ದಿ ಹದಮಾಡಿದವ ನೀನು
ಈ ಬದುಕಿಗಂತೂ ನಾನೇ ಆಟದ ಬಯಲು
ನೀನು ತುಳಿದ ಈ ಎದೆಗದ್ದೆಯತುಂಬಾ
ಹೂ ಮುಳ್ಳು ಕಾಯಿ ಕಸುರು
ಹಣ್ಣು ಹಸಿರು ಕಹಿಯೊಗರು
ನಿನಗೆ ನಡಿಗೆ ಕಲಿಸಿ ನಾನೂ ನಡೆಯ ಕಲಿತೆ
ನೀನೆಂಬ ಕನ್ನಡಿಯೇ ನನ್ನ ಪರಿವಿಡಿ
ಓಡಿ ಕಾಡಿಸುವ ನೀನು ಸಿಗದಾಗಲೆಲ್ಲ
ನುಣುಚಿಕೊಳ್ಳುವ ನಿಜದ ಬಾಲ ನೆನಪು
ನಿನ್ನ ಬಾಲ್ಯದ ತುಂಬಾ ನಾನೇ ತುಯ್ದಾಡಿ
ಮತ್ತೆ ಮರುಕಳಿಸುವ ಅದೆ ಹಳೆಯ ನಾನು
 
ಹುಸಿಬದುಕಿನಲ್ಲಿ ಸ್ಥಿರ ವಾಗುವ ಮೋಹ
ಮಗನೆ ಕವಿತೆಗಳನ್ನು ಹಾರಿಬಿಟ್ಟಿದ್ದೇನೆ
ಇಲ್ಲವಾಗುವ ನಾನು ಇರುವೆನೆಂಬ ನೀನು
ಕಹಿ ಸತ್ಯಗಳೆಲ್ಲ ಅಪಚಕಗಳಾಗಿ ಭ್ರಮೆಯ ವ್ಯಸನ
ಬಿಟ್ಟು ಹೋಗಲೇ ಬೇಕು ಈ ಚಪ್ಪಲಿ ಈ ಪೆನ್ನು
ಈ ಹಾರ ಈ ಮಮಕಾರ
ಕೊಟ್ಟು ಪಡೆದದಕ್ಕೆಲ್ಲ ಲೆಕ್ಕವಿಟ್ಟವರಾರು
ಸುಡದಿರು ನನ್ನ ದೇಹವ
ಹೂತು ಬಿಡು, ಕೊಳೆಯಲಿ ದೇಹ ಗೊಬ್ಬರ
ಹುಳಗಳು ಹದ ಮಾಡಲಿ ಮಾಂಸ ಪಂಜರವ
ಸಸಿಯ ಬೇರಿನೊಳ ಹರಿದ ಜೀವ
ಎದ್ದು ನಿಂತ ರೆಂಬೆಗಳಲಿ ಹೂಹಕ್ಕಿ ತೂಗಿ ನೆರಳು ಬಾಗಿ
 

‍ಲೇಖಕರು G

April 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. bidaloti Ranganath

    ನಾವು ಅಳಿಸಿಹೋದಾಗ,ಪಳಯುಳಿಕೆಗಳಂತೆ ಉಳಿಯುವ ನಮ್ಮ ಕುಡಿಗಳು
    ಹೇಸರಾದರು ಉಳಿಸಲಿ ಎಂದು
    ಸಾರ್ವತ್ರಿಕವಾಗಿ ಈ ಪದ್ಯ ಒಂದು ಕಡೆ
    ಹೇಳಿದರೆ,ದೂರದಲ್ಲಿರುವ ಕವಿಗೆ ಪುತ್ರುವಾತ್ಸಲ್ಯ ಗಹನವಾಗಿದೆ ಅನ್ನಿಸುತ್ತಿದೆ
    “ನೀನು ತುಳಿದ ಎದೆ ಗದ್ದೆಯ ತುಂಬಾ
    ಹೂ ಮುಳ್ಳು ಕಾಯಿ ಕಾರು” ಸಾಲು ತುಂಬಾ ಚನ್ನಾಗಿದೆ ಕಹಿಯೊಗರು ಬೇಕಿರಲಿಲ್ಲ ಅಂತ
    ನನಗನ್ನಿಸುತಿದೆ,ಕೊನೆಯ ಐದು ಸಾಲುಗಳ ಅತ್ಯದ್ಭುತ ಸದಾಕಾಡುವ ಸಾಲುಗಳು,

    ಪ್ರತಿಕ್ರಿಯೆ
  2. bidaloti Ranganath

    ವಾಸುದೇವ ನಾಡಿಗ್ ಕರ್ನಾಟಕ ಕಂಡ ಶ್ರೇಷ್ಟ ಕವಿ
    ಅವರು ಪದ್ಯಗಳಲ್ಲಿ ಬಳಸುವ ತಂತ್ರಗಾರಿಕೆ,ಬಾವನೆಗಳ ಜೊತೆ ಆಟ
    ನಿಪುಣತೆ,ಜಾಣ್ಮೆಗಳಿಂದ ಅವರು ಬರೆಯುವ ಪ್ರತಿ ಪದ್ಯಗಳು
    ಮನಕಲಕುತ್ತವೆ.ಈ ಪದ್ಯವು ಸಹ ಉನ್ನತವಾಗಿದೆ.ಇಂತಹ ಪದ್ಯ ಕೊಟ್ಟ
    ಕವಿಗೆ ಧನ್ಯವಾದಗಳು.

    ಪ್ರತಿಕ್ರಿಯೆ
  3. Anil Talikoti

    ಮುಗುಮ್ಮಾಗಿ ಸುರುವಾಗಿ ಮಾಗಿ ಪಕ್ವವಾದ ಕವಿತೆ, ಆದರೂ , ಏಕೋ ‘ಸುಡದಿರು ನನ್ನ ದೇಹವ’ ಎನ್ನುವ ವಾಕ್ಯವಿರದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ? ದಿನಕರ ದೇಸಾಯಿ ಅವರ ತೂರಿ ಬಿಡು ನೆನಪಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: