ಪತ್ರಕರ್ತ ದಿನೇಶ್ ಮಡಗಾಂವ್ಕರ್ ಹೊಸ ಕಥಾ ಸಂಕಲನದೊಂದಿಗೆ ನಮ್ಮ ಮುಂದೆ ಬಂದಿದ್ದಾರೆ.
ಅವರ ‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು’ ಸಾಕಷ್ಟು ಸುದ್ದಿ ಮಾಡಿದೆ.
ಈ ಕೃತಿಯ ಸಂಭ್ರಮದಲ್ಲಿದ್ದ ಅವರನ್ನು ‘ಅವಧಿ’ ಫಟಾ ಫಟ್ ಮಾತಿಗೆಳೆಯಿತು.
ಗೆಂಡೆಹಳ್ಳಿ ರಾಮ ವನವಾಸಕ್ಕೆ ಏಕೆ ಹೋಗಿದ್ದು ?
ಈಗಿರೋ ಪರಿಸ್ಥಿತಿಯಲ್ಲಿ ನಾಡನಲ್ಲಿ ಇರುವುದಕ್ಕಾಗಲ್ಲಾ ಅದಕ್ಕೆ.
ಮೊದಲ ಪುಸ್ತಕ ಬರೆದ ಅನುಭವ ಹೇಗಿತ್ತು ?
ಇದು ತುಂಬಾ ವರ್ಷಗಳಿಂದ ನಾನು ಆಗಾಗ ಬರೆದ ಕಥೆಗಳ ಪುಸ್ತಕ. ತುಂಬಾ ಕುತೂಹಲ ಇತ್ತು ಮತ್ತು ಇದೆ.
ಈ ಕಥಾಸಂಕಲನಕ್ಕೆ ಸ್ಪೂರ್ತಿ ಏನು ?
ಸಮಾಜದಲ್ಲಿ ತುಂಬಾ ಕಾಡುವಂತ ಜಾತಿ, ಧರ್ಮ. ಶ್ರೀಮಂತ ಬಡವರ ನಡುವಿನ ವ್ಯತ್ಯಾಸ ಹಾಗೂ ನಾನು ನೋಡಿರುವ ಕೆಲವು ಘಟನೆಗಳು ಮತ್ತು ವ್ಯಕ್ತಿತ್ವಗಳು.
ಗೆಂಡೆಹಳ್ಳಿ ಎಲ್ಲಿದೆ ?
ಗೆಂಡೆಗಳ್ಳಿ ಎಲ್ಲರ ಮನಸಲ್ಲಿದೆ.
ಮುಂದಿನ ಕೃತಿ ಯಾವುದು ?
ಡಿ.ಹೆಚ್.ಲಾರೆನ್ಸ್ ಅವರ ‘ರಾಕಿಂಗ್ ಹಾರ್ಸ್ ವಿನ್ನರ್’ ಎನ್ನುವ ಇಂಗ್ಲೀಷ್ ಕಥೆಯನ್ನ ಕನ್ನಡಕ್ಕೆ ಅನುವಾದ ಮಾಡಿ ಆಗಿದೆ. ಅದನ್ನ ಪ್ರಕಟಿಸಬೇಕು.
0 ಪ್ರತಿಕ್ರಿಯೆಗಳು