ಗೀರ್ವಾಣಿ
ರಾಧೆ, ರಾಧೆಗೊಬ್ಬ ಶ್ಯಾಮ,
ಶ್ಯಾಮನಿಗೊಂದು ಕೊಳಲು.
ಆ ಕೊಳಲೀಗ ಬೇಡ
ಕೊಟ್ಟುಬಿಡು ಶ್ಯಾಮ
ಬಿದಿರ ಮೆಳೆಗೆ !
ನಾ ಬಂದಾಯಿತಲ್ಲ !
ಮರಳಿಸಿ ಬಿಡು ನೀ ನುಡಿಸಿದ
ಜನ್ಮಾಂತರದ ನಾದಗಳನ್ನು,
ಎದೆ ಸೇರಿದ ಹಾಡುಗಳನ್ನು,
ಇನ್ನಿಲ್ಲದಂತೆ ಕಾಡಿದ ರಾಗಗಳನ್ನು
ಪಾಪ ! ನೊಂದುಕೊಂಡಾವು ಬಿದಿರ ಮೆಳೆಗಳು.
ಪಾಪದ ಬಿದಿರು ಇದು,
ಒಂದೇ ಸಮ ತುಯ್ಯುತಿದೆ ಮೋಹನಾ
ನೀನೂದಿದ ಉಸಿರಿಗೆ .
ದಮ್ಮಯ್ಯ ನಿನಗೆ, ವಾಪಸ್ ಕೊಟ್ಟುಬಿಡು
ಕೊಳಲನ್ನ ಬಿದಿರ ಮೆಳೆಗೆ
ನಾನೇ ವೀಣೆಯಾಗುವೆ ನಿನ್ನ ಬೆರಳಿಗೆ !!!
0 ಪ್ರತಿಕ್ರಿಯೆಗಳು