ಡಿ ಬಿ ರಜಿಯಾ
ಕಂದರ
ಬಿರುಗಾಳಿಗೆ
ಸಿಕ್ಕ ಮಾತು-
ಎದೆ ಯುದ್ದಕ್ಕೂ ಗೋಡೆಯಾಗಿ
ಬದುಕು ಹಿಂಡದಿರಲಿ
ಆ- ಸುಳಿಗೆ ಸಿಕ್ಕು
(ಅ) ಧರ್ಮ
ಹಣಚೆಲ್ಲಿ
ರಾಜಕಾರಣ
ಧರ್ಮಪೀಠಗಳ
ಹಿಡಿಯಿತು
ಜಾತಿ ಪಂಥದಿ
ಧರ್ಮಗುರು
ಜನರ ಒಡೆದು
ರಾಜಕೀಯ ನಡೆಸಿತು.
ಬೇಟೆ
ಕುತಂತ್ರ
ನಿಯೋಜನೆಯ
ಖೆಡ್ಡಾಕ್ಕೆ
ತಳ್ಳೇ ಬಿಡುವರು
ನಾಡಿನ ಶಿಕಾರಿಗಳು
ಅತಿ ಚಾಲಾಕಿತನದಿ
0 ಪ್ರತಿಕ್ರಿಯೆಗಳು