ಜಿ ಪಿ ಬಸವರಾಜು ಹೊಸ ಕವಿತೆ- ದಂಡ ಹಿಡಿದು ನಿಂತಿದ್ದಾನೆ ದೊರೆ

ಜಿ ಪಿ ಬಸವರಾಜು

**

ದಂಡ ಹಿಡಿದು ನಿಂತಿದ್ದಾನೆ

ದೊರೆ

ಮಂದಿರದ ಹೆಬ್ಬಾಗಿಲಲ್ಲಿ

ಮೊಳಗುತ್ತಿದೆ ಗಂಟೆ ಸದ್ದು

ಊರು ಕೇರಿಯ ತುಂಬಿ

ಕಾಡು ಕಣಿವೆಯ ತುಂಬಿ

ಕೇಳುತ್ತಿಲ್ಲ

ಯಾವ ಮಾತು ಯಾರಿಗೂ

ಮಾತಲ್ಲ ದೊರೆಯದು

ಪಾಲಿಸಬೇಕು ಆಣತಿಯ

ಪಡಿನುಡಿಗಿಲ್ಲ ಎಡೆ

ನಡೆಯಬೇಕು ಶಿರಬಾಗಿ

ಮಾತಲ್ಲ, ನಡೆ, ನಡೆಯಬೇಕು

ಮುಂದೆ ಮುಂದೆ ಮಂದೆ

ದೊರೆಯ ಮಾತು

ಒಂದೇ

ಒಂದೇ ಭಾಷೆ

ಒಂದೇ ನಾಡು

ಒಂದೇ ಮಂದಿರ

ಒಂದೇ ದೈವ

ಉಡು ತೊಡು

ಒಂದೇ ಬಟ್ಟೆ

ತೊಟ್ಟುಕೊ ಒಂದೇ ಬಟ್ಟೆ

ಕಣ್ಣು ತುಂಬಿಕೊ ಒಂದೇ ಬಣ್ಣ

ʼಅನ್ಯಕ್ಕೆಳಸಿದರೆ

ಕಿವಿ ಮೂಗ ಕೊಯ್ವʼ

ತೆಗೆದೆಸೆ ಕಸ ತಲೆಯಿಂದ

ಬಿಡು ಇನ್ನೊಂದು ಮತ್ತೊಂದು

ಬೇರಿಲ್ಲ ದೈವ

ನೋಡಿಲ್ಲಿ, ಈ ನಾಡಿನಲ್ಲಿ

ಎಲ್ಲವೂ ಒಂದೇ

ಚರಿತ್ರೆ ಪುರಾಣ ಪುಣ್ಯಕತೆ

ಕೆಡುಕಿನ ತಲೆ ಕಡಿ

ಒಳಿತನು ಮೆರೆಸು

ಹೇಳುತ್ತಾನೆ ದೊರೆ

ಯಾವುದು ಒಳಿತು

ಯಾವುದು ಕೆಡುಕು

ರಾಮ-ರಾವಣರ ಕತೆ

ಪುರಾತನವಲ್ಲ  ಅಣ್ಣ

ಈಗಲೂ ನಡೆದಿದೆ ಯುದ್ಧ

ರಾಮ ಹೂಡಿದ್ದಾನೆ ಬಾಣ

ಕೊಡು ತಲೆ ಬಲಿದಾನಕ್ಕೆ

ಹರಿವ ನೆತ್ತರನು ಬೊಗಸೆಯಲ್ಲಿ ತುಂಬಿ

ಬಿಡು ತರ್ಪಣವ ಹಿರಿ ಹಿರಿಯರಿಗೆ

ಬಗೆದು ನೋಡು

ಅಗೆದಗೆದು ನೋಡು

ಸಿಗುವ ಮೂಳೆಗಳ ಮೇಲೆ

ಬರೆದ ಕತೆಯೂ ಅದೇ

ಕಟ್ಟು ನಿಜದ ನಾಡನು

ಹಾಡು ಹಳೆಯ ಹಾಡನು

ನಾವೆಲ್ಲ ಒಂದೇ ನಾವೆಲ್ಲ ಒಂದೇ

ಅಪಸ್ವರವೆತ್ತಿದರೆ

ಕೆಡುವುದು ಕಚೇರಿ

ನಡೆ ಆಚೆ

ಅನಂತವಾಗಿದೆ ಲೋಕ

ಕಟ್ಟಿಕೊ ನಿನ್ನದೇ ನಾಡು

ಕಟ್ಟಿಕೊ ನಿನ್ನದೇ ಭಾಷೆ

ಕಟ್ಟಿಕೊ ನಿನ್ನದೇ

ಮಂದಿರವೊ ಮಸೀದಿಯೊ

ಚರ್ಚೊ ವಿಹಾರವೊ ಅಲ್ಲಿ

ವಿಕಾರಗೊಳಿಸಬೇಡ

ಈ ಪುಣ್ಯ ನಾಡನ್ನು

ಅವತಾರಿಗಳು ನಡೆದಾಡಿದ ಬೀಡನ್ನು

ಎತ್ತಿಕೊ ಪವಿತ್ರ ಮಣ್ಣನ್ನು

ಹಣೆಗೊತ್ತಿಕೊ

 ನಡೆಮುಂದೆ ನಡೆಮುಂದೆ ನಡೆಮುಂದೆ

                    

‍ಲೇಖಕರು avadhi

January 30, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: