ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಕಡ

ಜಯಶ್ರೀ ಬಿ ಕದ್ರಿ
**


ಯಾರಿಂದಲೂ ಏನನ್ನೂ
ಕಡ ಕೇಳಬಾರದು

ಪ್ರೀತಿಯ ಕಡವನ್ನು
ಆದರದ ಕಡವನ್ನು
ಕಡೆಗೊಂದು
ಮುಗುಳು ನಗೆಯನ್ನು
ಕೂಡ

ಯಾರಿಗೂ ಕಡವನ್ನು
ಕೊಡಲೂ ಬಾರದು
ಪ್ರೀತಿಯ ಕೊಡ ತುಂಬಿ
ಪನ್ನೀರೆಂದು
ಬೂದಿಗೆ ಸುರಿದರೆ
ವ್ಯರ್ಥ

ಒಲುಮೆಯಿಂದ ಅಕ್ಕರೆಯ
ಪೂರ ಹರಿಸಿದರೆ
ವ್ಯರ್ಥ
ಈ ಭೂಮಿ ಈ ಕಾನು
ಈ ನೀರು ಈ ಗಾಳಿ
ಎಲ್ಲವೂ
ದೇವರಿತ್ತ ಕಡ
ಆಗಿರುವಾಗ

ಯಾರಿಗೆ ಯಾರೂ
ಕಡ ತೆರುವುದೂ ಬೇಡ
ಪಡೆಯುವುದೂ ಬೇಡ

ಎಂದೆಲ್ಲ ಹೇಳಿದರೂ
ಮನಸು ಮಗುವಾಗಿ
ಲಾಲಿಪಾಪ್ ನಂತೆ
ಕಡ ಕೇಳುತ್ತದೆ
ಕೆಲವು ಕಡವನ್ನು
ತೀರಿಸಲೇ ಆಗದು
ತಲೆ ಸವರಿ ತಲೆದೂಗಿದ
ಟೀಚರಿನ ಕಡವನ್ನು
ನೆರಿಗೆ ತುಂಬಿದ ಮೊಗದಿ
ಬೆಳಕು ಹರಿಸಿದ ಕಡವ

ಕೇಳದೆಯೆ ಕೊಟ್ಟವರು
ನಸು ನಗುತ ನಿಂದವರು
ಬಾಳ ಹಾದಿಯಲಿ
ಕೈ ಬೀಸಿದವರು

ಹಾಗಾಗಿಯೇ ನಾನೀಗ 
ಯಾವ ಲೆಕ್ಕವನು ಇಡುತ್ತಿಲ್ಲ

ಕೊಟ್ಟಿದ್ದು ಕಡ
ಪಡೆದುಕೊಂಡದ್ದೂ
ಕಡವೇ

‍ಲೇಖಕರು avadhi

December 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: