ಅನಘ ನರಸಿಂಹ ಸಿ ಎನ್
ಹಚ್ಚಿದ ಮೇಕಪ್
ಬೆವರಿನಲ್ಲಿ ಅಳಿಸಿಹೋಗಿ
ಬ್ಲಾಕ್ ಔಟ್ ಆದರೂ
ಬ್ಯಾಕ್ ಔಟ್ ಆಗದೇ
ರಂಗದ ಮೇಲೆ
ಸಂಭಾಷಣೆ ಮರೆತು
ಕಲ್ಲಿನ ವಿಗ್ರಹವಾಗಿ
ದೇವರೇ ನಾನೆಂಬಂತೆ
ಪ್ರೇಕ್ಷಕ ಪ್ರಭುಗಳು
ತನ್ನ ಭಕ್ತರೆಂಬಂತೆ
ಅರಿವಿನ ಪರದೆಯಾಚೆಗಿನ
ಸ್ಪಾಟ್ ಲೈಟ್ ಚೆಲ್ಲಿದ ಮುಸುಕಿನಲಿ
ಜಗವೆಲ್ಲಾ ರಂಗಮಂದಿರವಾಗಿರೆ
ಇರಿದ ಚೂರಿ
ಬೆನ್ನಿನಿಂದ ಸಾಗಿ
ರಕ್ತ ಚೆಲ್ಲದೇ
ಹೊಟ್ಟೆಯಿಂದ ಹೊರಬರುವುದು
ವಿಷ ಕನ್ಯೆಯ
ಕಣ್ನೋಟ
ಕಾಮಾಗ್ನಿಯಲ್ಲೇ
ಚಟ್ಟ ಕಟ್ಟಲೆತ್ನಿಸುವುದು
ನರ್ತಕಿಯ ಮೋಹಕ್ಕೆ
ಸೂತ್ರಧಾರನೇ ನಾಟ್ಯವಾಡಿತ್ತಿರೆ
ನಾಟಕ ರಚಿಸಿದಾತನಿಗೆ ಅನುಮಾನ
ಈ ನಾಟಕ ತನ್ನಿಂದಲೇ ರಚಿತವಾದುದೇ ಎಂದು
0 ಪ್ರತಿಕ್ರಿಯೆಗಳು