ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕಾಡುವ ಸಾವಿಗೆ ಕಾಲದ ಮುಲಾಮು…

ಚೈತ್ರಾ ಶಿವಯೋಗಿಮಠ

ಹೋದ ಕಡೆಯಲ್ಲೆಲ್ಲ
ಬೆನ್ನು ಹತ್ತಿ ಕಾಡಿದ ಈ
ಸಾವು ಎಂತಹದಿರಬೇಕು?
ಒಡಹುಟ್ಟಲಿಲ್ಲ ಒಡನಾಡಲಿಲ್ಲ
ಕಾಡಿ ಕಂಗೆಡಿಸಿದ ಈ ಸಾವು
ಅದೆಂತಹದಿರಬೇಕು?

ಪ್ರತಿ ಕ್ಷಣದ ಧ್ಯಾನ
ಮರುಕ್ಷಣದ ಮೌನ
ಎಲ್ಲದರಲೂ ಪಲುಕುತಿದೆ
ಅವನ ನ್ಯಾಯಾಲಯದಲ್ಲಿ
ಈ ಸಾವಿನ ವಕಾಲತ್ತು ವಹಿಸಿ
ವಿಧಿಯೆಂಬ ಅಪರಾಧಿಯನ್ನು
ಗಲ್ಲಿಗೇರಿಸಲು ವಾದಿಸಿದೆ ಮನ

ಅತಿಮೋಹಿಯಲ್ಲ, ಕಲಹಿಯಲ್ಲ
ತನ್ನ ಪಾಲಿನ ಬುತ್ತಿಯನೆ
ಹಂಚಿಕೊಂಡು ಉಂಡವನ ಪಾಲಿಗೆ
ಮೃತ್ಯು ಉಳಿದದ್ದು ಮಾತ್ರ ಖೇದ
ಅಸಂಖ್ಯರ ಉಡಿಯ ತುಂಬಾ
ಅಗಾಧ ಪ್ರೀತಿ ಚೆಲ್ಲಿದವನ
ಎಬ್ಬಿಸಿ ಹೊರಡಿಸಿದೆ ವಿಧಿ

ನೀಡಿದ ಕೈಯ ಆಯ
ಬೇಡಿದ ಕೈಗಳಿಗೂ ತಿಳಿಸದ
ವಿಶಾಲ ಅಂಗಳದಲ್ಲಿನ
ಮಿನುಗುವ ಧೃವತಾರೆ
ಬರಿದೆ ತಾರೆಯಾಗದೆ
ಅದೆಷ್ಟೊ ಜೀವನಗಳ
ಬೆಳಗಿದ ದಿನಕರನ
ಹರಸಿದ ಹಾರೈಕೆಗಳ
ಹುಸಿಹೋಗುವಂತೆ
ನುಂಗಿಕೊಂಡಿತು ಕಾಲ

ಈ ಕಾಡುವ ಸಾವಿನಿಂದ
ತಪ್ಪಿಸಿಕೊಳ್ಳಲು ಕಾಲದ
ಮುಲಾಮಲ್ಲದೆ ಮತ್ತಿನಾವ ಇಲಾಜು
ಇಲ್ಲವೆನಿಸಿದೆ!

‍ಲೇಖಕರು Admin

November 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ನಿಜ ಚೈತ್ರ, , ಕಾಲವೊಂದೇ ಈ ನೋವಿಗೆ ಮುಲಾಮು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: