ಲೀಲಾವತಿ
ಎಂದೋ ಹಳಸಿಹೋದ
ಮಾತುಗಳಿಗೆ ಮತ್ತೆ
ಹೊಸ ರೂಪ ಕೊಡುವ
ಹುನ್ನಾರವೇಕೆ?
ಗೋರಿಯಲ್ಲಿ ಹುಗಿದ ಜೀವ
ಮತ್ತೆ ಮೇಲೆದ್ದು ಬಂದು
ನಿನ್ನ ತಬ್ಬುವದೆಂಬ
ಭ್ರಮೆ ನಿನಗೆ ಏಕೆ?ಮಾರಾಟಕ್ಕಿಟ್ಟ ಪುಸ್ತಕಕ್ಕೆ
ಈಗ ಮುನ್ನುಡಿ ಬರೆವ ಹವಣು.
ನಗೆಯು ಬರುತಿದೆ ನನಗೆ
ಮನವ ಮುರಿದು ಹೃದಯ ಹರಿದು
ಬೆನ್ನು ತಿರುಗಿಸಿ ನಡೆದ ಚಿತ್ರ
ನನ್ನ ಕಣ್ಣೀರ ಕೊಳದ ತುಂಬ
ಇದ್ದಕಿದ್ದೊಲೆ ಇದಾವ ಹೊಸ ರಾಗ
ನೆನಪಿದೆಯೇ
ಎರಡು ಜೀವದ ನಡುವೆ
ಗೋಡೆ ಎಬ್ಬಿಸಿದ ಆ ದಿನ?
ಇರಲಿ ಬಿಡು….
ಗೋಡೆಯ ತುಂಬಾ
ನೀ ಬರೆದ ಪ್ರೇಮ ಪತ್ರಗಳ
ಚಿತ್ತಾರದ ಚಿತ್ರ ಸಂತೆ.
0 ಪ್ರತಿಕ್ರಿಯೆಗಳು