ಮರೆಗವಿತು ಕಾಡಲವನ…
ನಾಗೇಶ ಮೈಸೂರು
ಸಾಲುಗಂಬಗಳ ಸಂದಿನಿಂದ
ಇಣುಕುತ್ತಿದ್ದಾನೇನೇ ಅವನು ?
ಸದ್ಯ! ಚಾಮರ ನಿತಂಬದಂದ
ಸೀಳಿದ ಜಡೆಯೆಡಗಡೆಯಲ್ಲೆ
ಮರೆಯಾಗಿ ಕಾಡುವೆ ಮನದನ್ನನ…
ಗುಟ್ಟು ಬಿಟ್ಟುಕೊಡದೆ ನಿಲ್ಲೆ
ಅಲುಗಾಡದೆ ಆಡಿಸದೆ ಚೆನ್ನೆ
ನಿನ್ನುದ್ದಕು ನಿಮಿರಿದ ವೇಣಿಗೆ
ಪಡುತಸೂಯೆ ಕಾಡುವೆ ಅವನ
ನಿನ್ನ ಕಟಿಬಂಧದ ಒಡಪಲ್ಲಡಗಿ.
ಬಿಟ್ಟುಕೊಟ್ಟೆನೆಂದು ಮೂಳಿ
ಹಚ್ಚಿಕೊಂಡಿಯಾ ಜೋಕೆ ಅವನ !
ಕಣ್ಣೆತ್ತಿಯೂ ನೋಡದೆ ಅತ್ತ
ಮರೆಮಾಚೆನ್ನ ಆವರಿಸುತ್ತಾ
ಕಾಣಬೇಕೆಷ್ಟು ಒದ್ದಾಡೀತವನ ಮನ.
ಸುಮ್ಮನಿದ್ದು ಬಿಡಬೇಡವೆ ಮಳ್ಳಿ
ಹುಡುಕುತ್ತ ಚಡಪಡಿಸುವಾಗ
ಸದ್ದು ಮಾಡೆ ಗೆಜ್ಜೆ ಸುಳಿವಿತ್ತು
ಇಹಳಿಲ್ಲೆ ಎಂದರಳಲಿ ವದನ
ಎಷ್ಟಾಗಲಿ ಅವ ನನ್ನಾ ಮದನ.
0 ಪ್ರತಿಕ್ರಿಯೆಗಳು