
ವಿದ್ಯಾರಶ್ಮಿ ಪೆಲತ್ತಡ್ಕ
ನಗೆ ಮಲ್ಲಿಗೆಯ ಗಿಡದಲ್ಲಿ
ಹುದುಗಿದೆ ನೋವ ಮೊಗ್ಗು
ಮೆಲ್ಲಗರಳುತ್ತದೆ ಘಮ ಬೀರಿ
ಅವನ ಸುತ್ತ ಪರಿಮಳ ಹರಡಿ
ನಿಲ್ಲುವಾಗ
ಅವನೋ ತಣ್ಣೀರಡಿ ನಿಂತ ಬಂಡೆ,
ನಿಶ್ಚಲ ನಿಶಾಂತ.
ಹೇಳಿಬಿಡುವೆ ಒಮ್ಮೆ
ಆಲಿಸಿಬಿಡು ಅನ್ನುವ
ಅವಳಿಗೆ ನಿಸೂರಾಗುವ ತವಕ
ವಟವಟಿಸುತ್ತಲೇ ಇರುವಳು
ಅವನ ಮನವಿಲ್ಲಿಲ್ಲ
ಆಲಿಸಲು ಜನವಿಲ್ಲ
ಗೌರೀದುಃಖ ಶಿವನಿಗೂ ಬೇಡವಂತೆ
ಹೇಳಿ ಹೇಳಿ ಸಾಕಾಗಿ
ಕೊನೆಗೊಂದು ನಿಟ್ಟುಸಿರಿಟ್ಟು
ಎಲ್ಲ ಕಟ್ಟಿ ಅಟ್ಟಕ್ಕೆಸೆಯ
ಹೊರಡುವಾಗ
ಅದೋ ಬಂದ ಕೃಷ್ಣ…
ಸಮಯವಿದೆಯಂತೆ ಗೋಪೀಲೋಲನಿಗೆ
ಗೌರೀದುಃಖ ಆಲಿಸಲೂ!
ಶಿವನೇ, ಎಚ್ಚರೆಚ್ಚರ…





0 Comments