ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿರೋಧ ಸಮಾವೇಶ ಜರುಗುತ್ತಿದೆ.
ಇದಕ್ಕೆ ಪೂರ್ವಭಾವಿಯಾಗಿ ಇಂದು ಸಾವಿರಾರು ಕೊಡೆಗಳಿಗೆ ಗೌರಿ ಭಾವಚಿತ್ರ ಬಿಡಿಸುವ ಕೆಲಸ ಆರಂಭವಾಗಿದೆ.
ನಾಳಿನ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ಈ ಕೊಡೆಗಳನ್ನು ಹಿಡಿದು ಹೆಜ್ಜೆ ಹಾಕಲಿದ್ದಾರೆ.
ನಂತರ ಸಮಾವೇಶದ ಸ್ಥಳದಲ್ಲಿ ಕಲಾವಿದರು ಸೇರಿ ಈ ಕೊಡೆಗಳಿಂದಲೇ ಪ್ರತಿಷ್ಠಾಪನಾ ಕಲೆಯನ್ನು ರೂಪಿಸಲಿದ್ದಾರೆ
ನಗರದ ಕಲಾವಿದರು ಚಿತ್ರಕಲಾ ಪರಿಷತ್ ನಲ್ಲಿ ಬಂದು ಸೇರುತ್ತಿರುವ ಕೊಡೆಗಳ ಮೇಲೆ ನಾನೂ ಗೌರಿ ಎನ್ನುವ ಬರಹ ಬರೆದು ಅವರ ಚಿತ್ರ ಬಿಡಿಸುತ್ತಿದ್ದಾರೆ
0 ಪ್ರತಿಕ್ರಿಯೆಗಳು