ಗರ್ವಪದ

ಲಲಿತಾ ಸಿದ್ಧಬಸವಯ್ಯ

ಈ ಛಾಯಾಚಿತ್ರವನ್ನು ನೋಡಿ ಲಲಿತಾ ಸಿದ್ಧಬಸವಯ್ಯನವರು ಅವಧಿಗಾಗಿಯೇ ಬರೆದ ಕವನ ಇಲ್ಲಿದೆ.

ದೇಶದ ರೈತರಿಗೆ ಈ ಕವನ ಅರ್ಪಣೆ.

ಕಳ್ಳ ವಾಮನನ ಪಾದವಲ್ಲ
ಇದು ದುಡಿದು ಸವೆದ ಪಾದ
ಅಂಗಾಲು ಮಿಂಚುವುದಿಲ್ಲ
ಎಣಿಸಬಹುದು ನೂರು ಛಿದ್ರ

ಎತ್ತಿಟ್ಟಿದ್ದೇನೆ ಗರ್ವದಲಿ ತಲೆ
ಎತ್ತಿ ನಡೆಯಲು, ಅಮಾಯಕ
ಶಿರವ ಪಾತಾಳಕದುಮಲಲ್ಲ
ಕುಟಿಲಹೆಜ್ಜೆ ಈ ಕಾಲು ಕಲಿತಿಲ್ಲ

ಎರಡೇ ಕಾಲು ಸಾಕು ಕಣೋ
ಆರುಮೊಳದ ಸೀರೆ,ಆರಡಿ ನೆಲ
ಸಂಪಾದನೆಗೆ, ನೀನು ಅವತಾರಿ
ಬೇಕು ಮೂರನೆಯದಿನ್ನೊಂದು

ಮೋಸದ ಲೋಕ ಮೋಜಣಿಗೆ
ಕಂಡವರ ತಲೆ ಬೋಳಿಸುವುದಕೆ
ಜೇನುತುಪ್ಪದುಪದೇಶ ಬಿಸಾಡಿ
ಅನಾಮತ್ತುಸಿರು ಹಿಸುಕುವದಕೆ

ಅರುಗಾಗೊ, ಹೊತಾರೆಯೆದ್ದು
ಮೈಗಳ್ಳರ ನೋಡಿದರೆ ಹುಟ್ಟದು
ಎನಗೆ ದಿನಗೂಳು, ಸೋಗಲಾಡಿ
ಹೊಸಿ ಹೋಗು ಹುಸಿಪುರಾಣ

‍ಲೇಖಕರು Avadhi

December 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vidya Bharatanahalli

    ತುಂಬಾ ಚೆನ್ನಾಗಿದೆ. ಅಮಾಯಕ ಶಿರವ ಪಾತಾಳಕದುಮಲಲ್ಲ ..ಇದೊಂದು ಸಾಲು ಸಾಕು

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಚೆನ್ನಾಗಿದೆ ಲಲಿತಕ್ಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: