ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಂಗಾ ಚಕ್ರಸಾಲಿ ಹೊಸ ಕವಿತೆ- ಯಾರ ಹೆಸರನ್ನು ಯಾರು ಉಸಿರಿಸಬೇಕು..

ಗಂಗಾ ಚಕ್ರಸಾಲಿ

——

ಇತಿಹಾಸದುದ್ದಕ್ಕೂ

ಶಾಂತಿಗಿಂತಲೂ ಯುದ್ಧ  ಪದ

ಹೆಚ್ಚು ಹೊಳಪು ಕಂಡಿದೆ.. |

ಶ್ರೇಷ್ಟ ರಾಜನೆಂಬ ಪಟ್ಟ

ಸುಮ್ಮನೇ ಬಂದಿಲ್ಲ..ಅಲ್ಲವೇ..

ಸಾವಿರಾರು ಯುದ್ಧಗಳಾಗಬೇಕು

ಲಕ್ಷಾಂತರ ಸಾವುನೋವುಗಳಾಗಬೇಕು

ಕೊನೆಗೆ ರಾಜನ ಹೆಸರು ದಾಖಲಾಗುತ್ತಿತ್ತು

ಶಾಸನಗಳಲ್ಲಿ..ಗ್ರಂಥಗಳಲ್ಲಿ…|

ಮತ್ತೆ ಬಡಸೈನಿಕರು

ಬುವಿಯಲ್ಲಿ ಮಣ್ಣಾಗುತ್ತಿದ್ದರು

ಯಾವ ಹೆಸರಿಲ್ಲದೇ..

ಆದರೆ ಅವರ ಹೆಂಡತಿ,ಮಕ್ಕಳು

ಅವರ ಹೆಸರನ್ನು ..ಉಸಿರುತ್ತಿದ್ದರು..|

ಈಗಿನ ಯುದ್ಧಗಳು ಅದೇ…

ಭೂಮಿಗಾಗಿಯಲ್ಲವೇ?.

ಅಹುದು..ಪ್ರತಿಷ್ಟೆಗಾಗಿಯೂ..|

ಘಟಿಸುತ್ತಿರುವುದು…

 ಕೇವಲ ಮರಣಗಳಲ್ಲ

ವಯಸ್ಸಿನ ಹಂಗಿಲ್ಲದ ಮಾರಣಹೋಮ

ಯಾರ ಹೆಸರನ್ನು ಯಾರು ಉಸಿರಿಸಬೇಕು?

ಕವಿತೆಯ ಸಾಲುಗಳಷ್ಟೇ…ಅಲ್ಲವೇ..

‍ಲೇಖಕರು avadhi

21 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading