ಕ್ಷಮೆ ಇರಲಿ ಅಕ್ಕ…

ರಾಘವೇಂದ್ರ ಜೋಶಿ

ಅಕ್ಕ ಹೇಳುತ್ತಾಳೆ:
ಬಿಟ್ಟೆನೆಂದರೂ
ಬಿಡದೀ ಮಾಯೆ;
ಬಿಟ್ಟುಕೊಟ್ಟರೂ
ಅಟ್ಟಿಸಿಕೊಂಡು
ಬಂತು ನೋಡಾ

ಇಂದ್ರನನ್ನು ಬಿಡಲಿಲ್ಲ
ಚಂದ್ರನನ್ನೂ ಬಿಡಲಿಲ್ಲ
ಹರಿಯನ್ನು
ನುಂಗಿತು
ಹರನನ್ನೂ
ಸುಟ್ಟಿತು

ಎಲ್ಲ ಬಲ್ಲೆ
ಅಂದವನ
ಬಲಗೈಯನ್ನೂ,
ಏನೂ ಗೊತ್ತಿಲ್ಲ
ಎಂದವನ
ಮೆದುಳನ್ನೂ
ತಿಂದು ಹಾಕಿತು

ಮುಠ್ಠಾಳರಾ,
ಒಳಗೆ ಶೋಧಿಸಿ
ಹೊರಗೆ ಶುದ್ಧಿಸಿ
ಮಾಯೆಯನ್ನು
ಮಾರುದ್ದಕ್ಕೆ
ಚಿಮ್ಮಿ
ಸ್ಪಟಿಕದ
ಸಲಾಕೆಯಂತೆ
ಊರ್ಧ್ವಗಾಮಿಯಾಗಿ!

ಹಾಗಂತ
ಹೇಳಿದ
ಅಕ್ಕ
ಕೂಡ
ಚೆನ್ನಮಲ್ಲಿಕಾರ್ಜುನನಿಗೆ
ಸೋತು
ಹೋದಳು

ಎಂಥ
ಮಾಯೆ?
ಇದೆಂಥಾ
ಮಾಯೆ?
ಅಕ್ಕ
ಸತ್ತರೂ
ಅಮಾವಾಸ್ಯೆ
ನಿಲ್ಲಬಾರದೆ?

‍ಲೇಖಕರು avadhi

May 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Muralidhar.Padaki

    Raghu, nee kalu hisida kavite yennu odide. santosha ayutu.
    Nanu Bangalore nalli, iddaga neenu ” wife of Laxman ” story
    munde varesu.
    God bless you.

    ಪ್ರತಿಕ್ರಿಯೆ
  2. sunaath

    RJ,
    ಮಾಯೆಯ ಜಾಲದಲ್ಲಿ ಸಿಲುಕದವರಾರು? ನಿಮ್ಮ ಕವನದಲ್ಲೂ ಸಹ ಮಾಯೆ ಇದೆ. ಅಭಿನಂದನೆಗಳು.

    ಪ್ರತಿಕ್ರಿಯೆ
  3. Yatheesh

    Joshiavare,
    Nimma kavitheya olagina artha chennagide. Bittaroo bidadi maaye ennuva haage nimma kavitheyallina goodarthavide. Ide reeti nimma baravanigeyannu munduvaresi.
    Nade munde Nade Munde Nuggi Nadeyiri Joshiyavare……..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: