ಕೊಟ್ರಗೌಡ ತೂಲಹಳ್ಳಿ ಕವಿತೆ- ಏಕಾಂತ!

ಕೆ ಜೆ ಕೊಟ್ರಗೌಡ ತೂಲಹಳ್ಳಿ

ಹೀಗೆ
ಒಬ್ಬಂಟಿ ಕತ್ತಲಿಗೆ
ರಸ್ತೆ ಪಕ್ಕದ ಬಿರಿಯಾನಿ
ಭಾಷಾನ ಬೀಡಾ
ನಿಗಿ ನಿಗಿ ಕೆಂಡದ ಸಿಗರೇಟು
ಒಟ್ಟು ಮಾಡಿದ ಏಕಾಂತವೇ
ನನ್ನ ಒಂಟಿತನ

ಆಗತಾನೇ
ಸುಧಾರಿಸಿಕೊಳ್ಳುವ ಕರಿ ಡಾಂಬಾರು
ವಿರಹ ಎಚ್ಚರಿಸುವ ತಂಗಾಳಿ
ಬದುಕ ಮರೆಸುವ
ಮಿನುಗು ನಕ್ಷತ್ರಗಳು
ಆಗೊಮ್ಮೆ ಹೀಗೋಮ್ಮೆ
ವಾಸ್ತವಕ್ಕೆ ಎಳೆದು ತರುವ
ಫ್ಯಾಕ್ಟರಿ ಸೈರನ್ನುಗಳು

ಒಂಟಿಕೋಣೆಯ
ಹಳೆಯ ಬಾಗಿಲಿಗೂ
ಹೊಸದಾದ ಕೋಣೆ ಕೀಲಿಗೂ
ಒಂದು ತತ್ವಶಾಸ್ತ್ರದ ಅಗತ್ಯವಿಲ್ಲ
ಎನಿಸುತ್ತದೆ
ಬೇರು ಹಳೆಯದಾದರೂ
ಚಿಗುರು ಹೊಸದಿರಬೇಕೆಂದು
ಎಚ್ಚರಿಸಿರುವ ಪರಂಪರೆಯ ತರುವಾಯ

ಆಗೊಮ್ಮೆ
ಖಾಲೀ ಮಂಚದ ಏಕಾಂತಕ್ಕೆ
ಬದುಕ ಬಲಿಕೊಟ್ಟ ದಿನಮಾನಗಳುಂಟು
ಒಂಟಿ ಫ್ಯಾನಿನ ಶಬ್ದ
ಕನಸ ಕೆಡಿಸುವ ಸೊಳ್ಳೆ
ಹಠಾತ್ತನೆ ಎಚ್ಚರಿಸುವ ಭ್ರಮೆ
ರೂಪಕಗಳಾದರೂ
ಭವಿಷ್ಯದ ಸೂತಕಗಳು!

ಹೀಗೆ ಒಮ್ಮೆ ಹುಚ್ಚನಾಗಿ
ಜಾಣನಾಗುವುದೆಂದರೆ
ವರ್ತಮಾನ ಮರೆತು ಪುನಃ
ವಾಸ್ತವಕ್ಕೆ ಮರಳುವ
ಅಭೂತಪೂರ್ವ ಪಯಣ
ಒಂಟಿತನ ಮತ್ತು ಸಾಂಗತ್ಯಕ್ಕೆ
ಅರ್ಥ ಕಲ್ಪಿಸುವುದೆಂದರೆ
ಸುಟ್ಟ ಬೀಡಿಗೆ
ತಂಬಾಕಿನ ತುಣುಕು ಲೆಕ್ಕ ಹಾಕಿದ
ದರಬೇಸಿ ಸಂಗನ ಬದುಕಿದ್ದಂತೆ!

‍ಲೇಖಕರು Avadhi

July 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: