ಕೆವಿಎನ್ ಮೇಷ್ಟ್ರಿಗೆ ಧನ್ಯವಾದಗಳು…

ಕಿರಣ್ ಗಾಜನೂರು

ವರ್ತಮಾನದಲ್ಲಿ ಬುದ್ಧಿಜೀವಿ ಎಂಬ ಪರಿಭಾಷೆಯ ಕುರಿತು ಅಪಹಾಸ್ಯ/ಗೇಲಿ ಇತ್ಯಾದಿ ಇತ್ಯಾದಿಗಳು ನಡೆಯುತ್ತಿವೆ, ಕೆಲವರಂತೂ ಇನ್ನು ಮುಂದೆ ಹೋಗಿ ಮೇಲಿನ ಮನೋಧೋರಣೆಯನ್ನು ಸೊ ಕಾಲ್ಡ್ ಪುಸ್ತಕವಾಗಿ ಪ್ರಕಟಿಸಿ ಸಮರ್ಥಿಸುವ ಹಂತಕ್ಕೂ ಹೋಗಿದ್ದರು…!
ಕನ್ನಡದ ಸಾಂಸ್ಕೃತಿಕ ಸಂಧರ್ಭದಲ್ಲಿ ನಡೆಯುತ್ತಿದ್ದ ಈ ಬೆಳವಣಿಗೆಯನ್ನು ಗ್ರಹಿಸುವುದು ಹೇಗೆ, ಇದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕೆಲವು ಟ್ರೋಲರ್‌ಗಳ ಮನಸ್ಥಿತಿಯೇ..? ಒಂದು ಸಿದ್ದಾಂತ ಬದ್ಧವಾದ ಜನರು ಮತ್ತೊಂದು ಸಿದ್ದಾಂತದ ಜನರನ್ನು ಹೀಗಳೆಯುವ ಮಾದರಿಯೇ ಇತ್ಯಾದಿ ಇತ್ಯಾದಿ ಪ್ರಶ್ನೆಗಳನ್ನು ಆಗಾಗ ಕೇಳಿಕೊಳ್ಳುತ್ತಿದ್ದೆ ಆದರೆ ಸ್ಪಷ್ಟತೆ ಸಿಕ್ಕಿರಲಿಲ್ಲ…!

ಪ್ರೊ. ಕೆ. ವಿ ನಾರಾಯಣ ಅವರು ಬರೆದ (ಭಾವಾನುವಾದಿಸಿದ) ಪ್ರಸಿದ್ಧ ಚಿಂತಕ ಸಾತ್ರೆ ಅವರ ಪುಸ್ತಕ ‘ಬುದ್ಧಿಜೀವಿಗಳ ಭಿಕ್ಕಟ್ಟು’ ಓದಿದ ಮೇಲೆ ಈ ವಿಷಯ ನಾನು ಅಂದುಕೊಂಡಷ್ಟು ಸರಳವಾದುದ್ದಲ್ಲ ಎಂಬ ಅರಿವು ಧಕ್ಕುತ್ತಾ ಹೋಯಿತು..!

ಈ ಪುಸ್ತಕದ ಕುರಿತ ಮೂರು ದಿನಗಳ ಅಧ್ಯಯನ ಶಿಬಿರದಲ್ಲಿ ‘ಬುದ್ಧಿಜೀವಿ’ ಎಂಬ ಹೀಗಳಿಕೆಗೆ ಒಂದು ಚರಿತ್ರೆಯೇ ಇದೆ, ಅದು ರೂಪುಗೊಳ್ಳುವುದು ಒಂದು ನಿರ್ದಿಷ್ಟ ಸಮಾಜೋ-ರಾಜಕೀಯ ಸನ್ನಿವೇಶದಲ್ಲಿ, ಪೂರ್ವ/ಪಶ್ಚಿಮಗಳ ಮಹತ್ವದ ಚಿಂತಕರು (ಚಾಮ್ಸ್ಕೀ, ರೋಮಿಲಾ ಥಾಪರ್/ಎಡ್ವರ್ಡ್ ಸೈದ್) ಆ ಸಮಸ್ಯೆಯೊಂದಿಗೆ ಅರ್ಥಪೂರ್ಣ ಭೌದ್ಧಿಕ ಸಂವಾದವೊಂದನ್ನೆ ರೂಪಿಸಿದ್ದಾರೆ ಎಂಬ ಅರಿವು ಧಕ್ಕುತ್ತಾ ಹೋಯಿತು…!

ಇನ್ನು ಮುಂದೆ ಯಾರಾದರೂ ಟ್ರೋಲರ್ ಬುದ್ಧಿಜೀವಿಯನ್ನು ಅಪಹಾಸ್ಯ ಮಾಡಿದರೆ, ಪುಸ್ತಕವನ್ನು ಬರೆದರೆ ನಕ್ಕು ಮುಂದಕ್ಕೆ ಹೋಗುವ, ಅವರದು ಗಂಭೀರ ಆರೋಪ ಅನ್ನಿಸಿದರೆ ನಿಂತು ಚರ್ಚೆ ಬೆಳೆಸುವ ಅರಿವು ರೂಪಿಸಿಕೊಟ್ಟ KVN ಮೇಷ್ಟ್ರಿಗೆ ಧನ್ಯವಾದಗಳು.

‍ಲೇಖಕರು Admin

November 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. M A Sriranga

    ಕಿರಣ್ ಗಾಜನೂರು ಅವರಿಗೆ…ಸರ್ ತಾವು ಈ ಲೇಖನ ದ ಪ್ರಾರಂಭದಲ್ಲಿ ಹೇಳಿದ ಬುದ್ಧಿಜೀವಿಗಳನ್ನು ಕುರಿತ “ಆ ಪುಸ್ತಕದ ಹೆಸರು” ಮತ್ತು ಅದರ ಲೇಖಕರ ಹೆಸರು ತಿಳಿಸುವಿರಾ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: