ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಅವರನ್ನು ಉಳಿಸಿಕೊಳ್ಳಬೇಕಾದ ಜವಾಬ್ಧಾರಿ ನಮ್ಮ ಮೇಲಿದೆ.
ಅವರು ಈ ಸಮಾಜಕ್ಕೆ ಮಾಡಿರುವ ಕೆಲಸ ಒಂದು ಸರ್ಕಾರ ಮಾಡುವ ಕೆಲಸಕ್ಕೆ ಸಮಾನವಾಗಿದೆ.
ನಮ್ಮ ಮುಖ್ಯಮಂತ್ರಿ ಏನೆಲ್ಲ ಭರವಸೆಯನ್ನು ಮಾಧ್ಯಮದಲ್ಲಿ ನೀಡಿದ್ದಾರೆ. ಮನ್ ಕಿ ಭಾತ್ ನಲ್ಲಿ ಕೂಡ ಪ್ರಧಾನಿಯವರು ಕೊಂಡಾಡಿದ್ದಾರೆ.
ಆದರೆ ಅವರು ಸೋತು ಸುಣ್ಣವಾಗಿರುವಾಗ ಒಳ್ಳೆ ಆಸ್ಪತ್ರೆ ಯಲ್ಲಿ ಆರೋಗ್ಯ ಸುಧಾರಿಸಲು ಚಿಕಿತ್ಸೆ ನೀಡಲು ಮುಂದಾಗಬೇಕಿದೆ.
ಮುಖ್ಯಮಂತ್ರಿ ಗಳ ಗಮನಕ್ಕೆ ತಕ್ಷಣ ತಂದು ಹೈ- ಟೆಕ್ ಚಿಕಿತ್ಸೆ ಕೊಡಿಸಲು ನಾವೆಲ್ಲ ಒತ್ತಾಯಿಸೋಣ.
-ಲೋಕೇಶ್ ಮೊಸಳೆ
0 ಪ್ರತಿಕ್ರಿಯೆಗಳು