ಕೂದಲೆಳೆಯಷ್ಟೇ ಮಿಂಚು ಭೂಮಿಯ ಕೊಂದಿದೆ

ಭುವನಾ ಹಿರೇಮಠ

ಅಜ್ಞಾತ ಅಲೆಯ ಕಡಲೊಂದರ
ನೆಲೆ ಹುಡುಕುತ್ತಾ
ಮಿಂಚುಹುಳುವಿನ ಮಿಣುಕಿನ
ಅಂಚಿನಲ್ಲೇ ನಡೆಯುತಿರುವಾಗ
ಅಂಗಾಲ ಮುದ್ದಿಸಿದ ಮರಳ ಕಣಕ್ಕೂ ಗೊತ್ತಾಗಿತ್ತು,
ಅವನು “ನನ್ನ ಮುತ್ತಿನ ಗುರುತೇ ಅಲ್ಲ” ಎಂದು ಆರೋಪಿಸಿದ.

ಕತ್ತಲೆಯಲ್ಲಿ ಯಾವ
ಶವಯಾತ್ರೆಯ ಶೃಂಗಾರವೂ
ವಿಜೃಂಭಿಸುವುದಿಲ್ಲ
ಅದೆಷ್ಟು ಏಕಾಂತ ಬಯಲ
ರಾತ್ರಿಗಳಿದ್ದವು ಬೊಗಸೆಯಲ್ಲಿ
ರೈಲು ಹಳಿಗಳೆರಡು ಸೇರಲೇಯಿಲ್ಲ
“ಒಂದು ಕಗ್ಗತ್ತಲು ಬರುವವರೆಗೆ ಕಾಯಲಾಗದೆ? ತಾಳ್ಮೆಯಿರಲಿ”
ಎನ್ನುತ್ತಾನೆ.

ಎವೆಯಿಕ್ಕದೆ ನೋಡುವ
ಆಗಸದ ಎದೆ ಅಂದೇ
ಆ ಗುಡುಗಿನ ಆರ್ಭಟಕೆ
ಬಿರುಕು ಬಿಟ್ಟಿದೆ
ಅವನು ದಿಢೀರನೆ  ಹೊರಳಿರಬೇಕು
ಕೂದಲೆಳೆಯಷ್ಟೇ ಮಿಂಚು
ಭೂಮಿಯ ಕೊಂದಿದೆ.
“ಬಾ ಇದು ನೀನೇ ಅಂದಿನಿಂದ
ಹುಡುಕುತ್ತಲೇ ಅಲೆದೆ,
ಜೀವವಿಲ್ಲದ ದೇಹದ ಮೇಲೆಯೇ
ಪ್ರೀತಿ ಜೀವಂತಗೊಳ್ಳುವುದು”
ಒಗಟು ಅರ್ಥವಾದ
ಮರುಘಳಿಗೆ ನಾವಿಬ್ಬರೂ
ಜೀವ ಕಳೆದುಕೊಂಡೆವು.

“ಯಾರನ್ನು ಯಾರು ಪ್ರೀತಿಸುವುದೀಗ?”
ಯಕ್ಷಪ್ರಶ್ನೆಯಲ್ಲಿಯೇ
ಅಂತ್ಯ ಶುರುವಾಗಿದೆ.

‍ಲೇಖಕರು avadhi

April 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: