ಕು ಸ ಮಧುಸೂದನ ರಂಗೇನಹಳ್ಳಿ – ನಾನೀಗ ಕಿವುಡಾಗಿದ್ದೇನೆ!…

ಕು ಸ ಮಧುಸೂದನ ರಂಗೇನಹಳ್ಳಿ

ತೋಟದೊಳಗೆ ಹೂ ಕೀಳುವ ಸಡಗರ
ಕೆನ್ನೆ ಮೇಲೆ ಕಣ್ಣೀರು

ಅಲೆಗಳಿಗೂ ಕೋಪಬಂದಿದೆ
ದಡವ ಮುತ್ತಿಡದೆ ಹಿಂದಿರುಗುತ್ತಿವೆ

ಪ್ರೀತಿಸಲೆ ಬೇಕೆಂದಿಲ್ಲ ಹೂಗಳ
ಹೂದಾನಿಯೊಳಗೊ ಕಲಾತ್ಮಕ ಚೂರಿಗಳು

ಬೆನ್ನಿಗಿರಿದು ನಗುತ್ತಾರೆ ನನ್ನದೇ ಜನ
ರಕ್ತ ಒಸರುತ್ತದೆ ಕಣ್ಣೀರು ಹನಿಯುವುದಿಲ್ಲ

ಕಲಿಸುವವರಿಲ್ಲ ಪ್ರೀತಿಸುವುದ
ದ್ವೇಷಕ್ಕೆ ಮಾತ್ರ ನೂರಾರು ಪಠ್ಯ ಪುಸ್ತಕಗಳು

ಉಡಿ ತುಂಬಾ ಅವಮಾನದ ಗಾಯಗಳು
ಮಾಯಿಸುವ ಮುಲಾಮಿಲ್ಲ

ಮೊರೆಯುತಿಹ ಬಂದೂಕುಗಳು
ಎದೆಯೊಡ್ಡಲಾಗದ ಹೇಡಿತನ

ಅರ್ಥ ಕಳೆದುಕೊಂಡ ಮಾತುಗಳು
ಮೌನ ಹೇಡಿಗಳ ಹತಾರವಾಗಿದೆ

ನಾನೇ ಬರೆದ ಕವಿತೆ ಅಪರಿಚಿತರ ಬಾಯೊಳಗೆ
ನನಗೀಗ ಕಿವುಡು

‍ಲೇಖಕರು Admin

February 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: