ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡು ಮೆಲ್ಲಗೆ..

ಅಂಜನಾ  ಗಾಂವ್ಕರ್

ಮಂದ ಬೆಳದಿಂಗಳಲಿ ಹುಡುಕುತಿರುವೆ ನಾ ಕಾಡುಮಲ್ಲಿಗೆ,

ಬೆಳಕಿನ ಈ ಕಣ್ಣಾಮುಚ್ಚಾಲೆಯಲಿ ನೀ ಕೃಷ್ಣ ಕಾಡುಮೆಲ್ಲಗೆ.

ಘಮವಿಲ್ಲದ ಈ ಕುಸುಮ ಬಿಳಿಯ ಕಾಡುಮಲ್ಲಿಗೆ,
ವಿರಹಿಯಾದ ಈ   ಮನದಿ ನೀ ಕೃಷ್ಣ ಕಾಡುಮೆಲ್ಲಗೆ.

ಸಿಕ್ಕ ಮರವ  ಆಸರೆಯಾಗಿಸಿ ಬೆಳೆದ ಬಳ್ಳಿಯ ನಾ ಕಾಡುಮಲ್ಲಿಗೆ,
ಒಮ್ಮೆ ಸೋಕಿ ನಿನ್ನ ಕೈಯ್ಯ ಶ್ವೇತ  ದಳಕೆ ಕೃಷ್ಣ ನೀ ಕಾಡುಮೆಲ್ಲಗೆ.

ಹೊಸಕುವ ಮುನ್ನ ತುಸು ಜೋಪಾನ ಕಾರಣ ನಾ ಕಾಡುಮಲ್ಲಿಗೆ,
ಸುಗಂಧಕಾಗಿ  ಹಾತೊರೆವ ಈ  ಮೃದು ಭಾವಗಳ ಕಾಡುಮೆಲ್ಲಗೆ.

ನಾಳೆ ‘ಅಂತಿಮ’ ಪಯಣದಲಿ ಒಣಗುವ ನಾ ಕಾಡುಮಲ್ಲಿಗೆ.
ಒಮ್ಮೆ ಬಂದು ಕೊಳಲ ನಾದ ಬೀರಿ ನೀ ಕೃಷ್ಣ
ಕಾಡುಮೆಲ್ಲಗೆ….

‍ಲೇಖಕರು avadhi

22 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading