ಜಯಶ್ರೀ ಬಿ ಕದ್ರಿ
ಹೂವು
ಹಾಗೆ ಒಂದು ಹೂವು
ಫಳ್ಳನೆ ನಕ್ಕಿತು
ಮೆದುವಾದ ಪಕಳೆ
ಮಣ್ಣಿನೊಡಲಿಂದ
ಮೊಳಕೆಯೊಡೆದ
ಒಂದು ಟಿಸಿಲಿನ ಮೊಗ್ಗು
ಬಿರುಗಾಳಿಗೆ ಉರಿಬಿಸಿಲಿಗೆ
ಬಾಡಿಹೋಗದಿರಲೆಂದು
ಚಿವುಟುವ ಕೈಗಳಿಗೆ ಸಿಕ್ಕದಿರಲೆಂದು
ಪ್ರಾರ್ಥನೆ

ಕವಿತೆ
ಒಂದು ಕವಿತೆ
ಅಲ್ಲೆಲ್ಲೊ
ಪಿಸುಗುಟ್ಟುತ್ತಿದೆ
ಕಂದನ ನವಿರು
ಕವಿತೆಯೆಂದರೆ ಮತ್ತೆ
ಗಾಯಕೆಲ್ಲ ಮುಲಾಮು ಹಚ್ಚಿ
ಕಣ್ಣೊರಸುವ ತಾಯಿ
ಕವಿತೆಗೂ ಭಾವಕೂ
ಏನೋ ನಂಟು
ಅರಳಿ ಅರಳಿ
ಬೆಳಕಾಗಿ ನೆಳಲಾಗಿ
ತುಂಬು ಮೌನ






ಚೆಂದಿವೆ
Thumba chennagive
Sangeetha
tumba channagide
uttama naviru bhaavada kavana,,
ಬಿರುಗಾಳಿಗೆ ಉರಿಬಿಸಿಲಿಗೆ
ಬಾಡಿಹೋಗದಿರಲೆಂದು
ಚಿವುಟುವ ಕೈಗಳಿಗೆ ಸಿಕ್ಕದಿರಲೆಂದು
ಪ್ರಾರ್ಥನೆ fine
mechcugaeyayitu naviraad kavana. bhava tumbida prarthaneya kalaji mechchugeyayitu