ಕವನ ಹುಟ್ಟಿತು

ಎಲ್‍.ಎಸ್‍. ಶಂಕರಸ್ವಾಮಿ

ಗರಿಕೆ ಹುಲ್ಲೊಂದು
ಗಾಳಿಗೆ ತೂಗಿ
ಚೆಲ್ಲಿತು ಮಂಜಿನ ಹನಿಗಳ

ನೀರಿನಲೆಯೊಂದು
ಚಿಪ್ಪನೊಂದನು ಅಪ್ಪಿತು
ಮಡಿಲ ತೊಟ್ಟಿಲಿಗೆ

ಬೆಳಕಿನ ಕಿರಣವೊಂದು
ಕುಕ್ಕಿ ಕತ್ತಲನು
ಕೋರೈಸುವ ಒಳನೋಟವಿತ್ತು

ಕಂಪಿಸಿ ಗರಿಯೊಂದು
ಶಾಯಿಯ ಕತ್ತಲಲಿ
ಸಾಲು ಕಟ್ಟುವುದು ವಸ್ತು ಪ್ರಾಸಗಳ

ಆ ಕ್ಷಣ ಲಲನೆಯರು ಹಾಡುವರು, ಕುಣಿವರು
ಕುಣಿವರು ನೆರಳುಗಳ ಅಟ್ಟಿ
ಪದಗಳ ಕಟ್ಟಿ

ಒಂದು ಕವನ ಹುಟ್ಟಿತು

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: