ಎಲ್.ಎಸ್. ಶಂಕರಸ್ವಾಮಿ
ಗರಿಕೆ ಹುಲ್ಲೊಂದು
ಗಾಳಿಗೆ ತೂಗಿ
ಚೆಲ್ಲಿತು ಮಂಜಿನ ಹನಿಗಳ
ನೀರಿನಲೆಯೊಂದು
ಚಿಪ್ಪನೊಂದನು ಅಪ್ಪಿತು
ಮಡಿಲ ತೊಟ್ಟಿಲಿಗೆ
ಬೆಳಕಿನ ಕಿರಣವೊಂದು
ಕುಕ್ಕಿ ಕತ್ತಲನು
ಕೋರೈಸುವ ಒಳನೋಟವಿತ್ತು
ಕಂಪಿಸಿ ಗರಿಯೊಂದು
ಶಾಯಿಯ ಕತ್ತಲಲಿ
ಸಾಲು ಕಟ್ಟುವುದು ವಸ್ತು ಪ್ರಾಸಗಳ
ಆ ಕ್ಷಣ ಲಲನೆಯರು ಹಾಡುವರು, ಕುಣಿವರು
ಕುಣಿವರು ನೆರಳುಗಳ ಅಟ್ಟಿ
ಪದಗಳ ಕಟ್ಟಿ
ಒಂದು ಕವನ ಹುಟ್ಟಿತು
0 ಪ್ರತಿಕ್ರಿಯೆಗಳು