ಕಳೆ ಬೆಳೆದು ಬೆಳೆ ಹುಡುಕಿದರೆ!

ಕು ಸ ಮಧುಸೂದನ ರಂಗೇನಹಳ್ಳಿ

ಮುಚ್ಚಿದ ಕಣ್ಣುಗಳು
ಶತಮಾನಗಳ ಕನಸುಗಳು
ತೆರೆದಿಟ್ಟ ಬಯಲು
ಇಲ್ಲದ ಗೋಡೆಗಳ ಕಟ್ಟಿ
ನಟಿಸುತಿಹರು ಎಡವಿದಂತೆ.

ಕಪೋಲಕಲ್ಪಿತ ಕತೆಗಳ ತುಂಬಿಟ್ಟ
ಪಠ್ಯಪುಸ್ತಕಗಳ ಉರುಹೊಡೆದು
ಹೊಟ್ಟೆ ಉಬ್ಬರಿಸಿ
ಬೆವರ ಬಸಿದರು ಜಿಮ್ಮುಗಳ ಬಿಮ್ಮಿನಲಿ

ರೆಟ್ಟೆ ಬಲ ಅರಿಯದ
ಪೀಳಿಗೆಯೊಂದ ಸೃಷ್ಠಿಸಿದ ತಪ್ಪಿಗೆ
ಇದ್ದ ಅಂಗೈಯಗಲ ನೆಲಕೆ
ಬದುಗಳ ಹಾಕಿ ಕೊಟ್ಟಿದ್ದಾಯಿತು.
ಉತ್ತುಕೊಳ್ಳಿ ನಿಮಗಿಷ್ಟಬಂದದ್ದೆಂದು.

ಹೇಳಿದ ಮಾತೇ ತಪ್ಪಾಯಿತೊ
ಕೇಳಿದ ಕಿವಿಗಳಿಗೆ ಅಪಾರ್ಥವಾಗಿತ್ತೊ
ಬಿತ್ತಿಬೆಳೆದಿದ್ದೆಲ್ಲ ಕಳೆಯೇ
ಬೆಳೆದವರಿಗೆ ಬೆಳೆದೆವೆನ್ನುವ ಭ್ರಮೆಯಾದರೆ
ಉಳಿದವರಿಗೆ ಕಳೆಯ ನಡುವೆ ಬೆಳೆಯ ಹುಡುಕುವ ಕೇಮೆ!

‍ಲೇಖಕರು Admin

November 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: