‘ಮನಸ್ಸಿದ್ದಲ್ಲಿ ಮಾರ್ಗ’
ಗಣಪತಿ ಅಗ್ನಿಹೋತ್ರಿ
ʻನನ್ನಿಂದ ಸಾಧ್ಯವೇʼ ಎಂದು ನನ್ನನ್ನೇ ಕೇಳಿಕೊಂಡಿದ್ದ ನನ್ನ ಮನಸ್ಸೇ ಇಂದು, ʻನೋಡು ನಿನ್ನಿಂದಲೂ ಸಾಧ್ಯʼ ಎಂದು ತೋರಿಸಿಕೊಟ್ಟಿತು. Friends, ನನ್ನದೊಂದು woodcut print ಕಲಾಕೃತಿ ಸೇರಿದಂತೆ ಒಟ್ಟು 75 ಕಲಾವಿದ -ಕಲಾವಿದೆಯರ ಕಲಾಕೃತಿಗಳು ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಪ್ರದರ್ಶನಗೊಂಡಿದ್ದವು. ಇದು ಕೇವಲ ಪ್ರದರ್ಶನ ಖಂಡಿತಾ ಅಲ್ಲ.
ಪ್ರತಿಯೊಬ್ಬ ಕಲಾವಿದನ ಮನಸ್ಸು ಹೇಳುವ ಕತೆ. ಮನಸ್ಸುಗಳ ಹಿಂದಿನ ಪರಿಶ್ರಮ. ಏನಿಲ್ಲ, ಏನಿದೆ ಎಲ್ಲವನ್ನೂ ಬಂದು ನೋಡಿದ ಬಳಿಕ ನಿಮ್ಮ ಮನಸ್ಸೇ ನಿಮಗೆ ಹೇಳಿಬಿಡುತ್ತದೆ. ನಿರ್ಧರಿಸಿಬಿಡುತ್ತದೆ. ನನ್ನಿಂದಲೂ ಯಾಕೆ ಸಾಧ್ಯವಿಲ್ಲ ಎಂದು ತೋರಿಸಿ ಕಿಚ್ಚು ಹಚ್ಚಿಸಿಬಿಡುತ್ತದೆ. ಮನಸ್ಸಿಗೊಂದು ತೃಪ್ತಿ ನೀಡುತ್ತದೆ. ಆತ್ಮವಿಶ್ವಾಸ ಹೆಚ್ಚಿಸಿಬಿಡುತ್ತದೆ. ಇದೇ ಈ ಕಲಾಕೃತಿಗಳ ಶಕ್ತಿ. ಇದೊಂದು ಹೊಸ ಅನುಭವ ನೀಡಿದೆ.
0 ಪ್ರತಿಕ್ರಿಯೆಗಳು