ಕಲಬುರ್ಗಿ ಸರ್ ಮನೆಗೆ ಹೋಗಿದ್ದೆವು…

ಡಾ ಸರಜೂ ಕಾಟ್ಕರ್

ವಿದ್ಯಾಗುರುಗಳಾದ ಡಾ ಎಂ ಎಂ ಕಲಬುರ್ಗಿ ಅವರು ಭೌತಿಕವಾಗಿ ನಮ್ಮಿಂದ ಅಗಲಿ ಏಳು ವರ್ಷಗಳಾದವು. ಏಳು ವರ್ಷಗಳ ಹಿಂದೆ ಅವರು ಹಂತಕನ ಗುಂಡಿಗೆ ಬಲಿಯಾಗಿದ್ದರು.

ಅವರಿಗೆ ಗೌರವ ಸಲ್ಲಿಸಲು ಬೆಳಗಾವಿಯಿಂದ ನಾನು, ಲೇಖಕ ಮಿತ್ರರಾದ ಡಾ ರಾಮಕೃಷ್ಣ ಮರಾಠೆ ಹಾಗೂ ಡಾ ಎ ಬಿ ಘಾಟಗೆ (ಇವರೂ ಗುರುಗಳ ಶಿಷ್ಯಂದಿರು), ಹಾವೇರಿಯಿಂದ ಕವಿ ಸತೀಶ್ ಕುಲಕರ್ಣಿ (ಈತ ಗುರುಗಳ ಮಾನಸ ಶಿಷ್ಯ), ಬೆಳಗಾವಿಯ ಡಾ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಅಧ್ಯಕ್ಷ ಹಾಗೂ ಸುಪ್ರಸಿದ್ಧ ಕಾದಂಬರಿಕಾರ ಡಾ ರಾಘವೇಂದ್ರ ಪಾಟೀಲ ಹಾಗೂ ಬೆಳಗಾವಿಯ ಬಸವರಾಜ ಕಟ್ಟೀಮನಿ ಟ್ರಸ್ಟ್ ಅಧ್ಯಕ್ಷ ಹಾಗೂ ಪ್ರಸಿದ್ಧ ಕಥೆಗಾರ ಹಾಗೂ ಕಾದಂಬರಿಕಾರ ಡಾ ಮಲ್ಲಿಕಾರ್ಜುನ ಹಿರೇಮಠ ಅವರುಗಳು ಧಾರವಾಡದಲ್ಲಿರುವ ಕಲಬುರ್ಗಿ ಸರ್ ಮನೆಗೆ ಹೋಗಿದ್ದೆವು.

ಉಮಕ್ಕ ಸ್ವಲ್ಪ ದಣಿದವರಂತೆ ಕಂಡರು.ಇತ್ತೀಚಿಗೆ ಅವರು ಕೋರ್ಟಿನಲ್ಲಿ ಗುರುಗಳ ಹಂತಕರನ್ನು ಗುರುತಿಸಿದ್ದರ ಬಗ್ಗೆ ವಿವರಿಸಿದರು.

ಹಂತಕರಿಗೆ ಯಾವಾಗ ಶಿಕ್ಷೆಯಾಗುತ್ತದೆಯೋ ಆ ನ್ಯಾಯ ದೇವತೆಗೇ ಗೊತ್ತು.

ಗುರುಗಳಿಲ್ಲದೆ ಕನ್ನಡದ ವೈಚಾರಿಕ ಕ್ಷೇತ್ರ ದಲ್ಲಿ ಒಂದು ರೀತಿಯ ಪೊಳ್ಳು ನಿರ್ಮಾಣವಾದಂತಾಗಿದೆ.

‍ಲೇಖಕರು Admin

August 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: