ಕರುಳ ಹಸಿವ ಚೀರಾಟದ ಲಾಲಿಗೆ..

ನಾದ ಮಣಿನಾಲ್ಕೂರು

ಮುಂಜಾವಾನೇ ಎದ್ದು ಸೌದೆ ಕಡ್ದು ತಲೆಹೊರೆ ಹೊತ್ತು ಊರಿಗೆ ತಂದಿದ್ದಳು ಅವ್ವ. ಊರ ದಾರಿಗಳಲ್ಲಿ ‘ಸೋದೆ ಸೋದೆ …’ ಅಂತ ಗಂಟಲು ಹರ್ಕೊಂಡು ಮಧ್ಯಾಹ್ನ ದಾಟೋವರೆಗೆ ಓಡಾಡಿದ್ರೂ ನಯಾಪೈಸೆಯ ವ್ಯಾಪಾರ ಆಗ್ಲಿಲ್ಲ.
ಜನರೆಲ್ಲಾ ಯುಗಾದಿ ಪಾಯಸ, ಊಟಗಳಲ್ಲೇ ನಿರತರಾಗಿದ್ರು.
ಕತ್ತಲವರೆಗೂ ಪಾದಗಳನ್ನು ಸವೆಸಿದ್ದೇ ಬಂತು. ಹೊತ್ತ ಸೌದೆಯ ಭಾರ ಹಸಿವನ್ನು ಮರೆಸಿತ್ತು. ಭಾರ ಪಾದಗಳನ್ನೂರುತ್ತಾ ಹಟ್ಟಿ ಕಡೆ ಬಂದವಳ ಕಂಗಳಲ್ಲಿ ನೋವಿರಲಿಲ್ಲ; ಆಶಾವಾದವಿತ್ತು.

ಮಕ್ಕಳನ್ನು ಕರೆದು ‘ಎಲ್ರಿಗೂ ಇವತ್ತೇ ಯುಗಾದಿಯಂತೆ ಕಂದಗಳ್ರಾ, ನಾಳೆ ಸೌದೆ ವ್ಯಾಪಾರ ಆದ್ರೆ ನಾವೂ ಗಂಜಿ ಮಾಡ್ಕೊಂಡು ಕುಡಿಯೋಣ’ ಅನ್ನುತ್ತಲೇ ಕತ್ತಲಲ್ಲೇ ಕಣ್ ಒರೆಸ್ಕೊಂಡ್ಳು ಅವ್ವ.

ಕರುಳ ಹಸಿವ ಚೀರಾಟದ ಲಾಲಿಗೆ ಎಲ್ಲರಿಗೂ ನಿದ್ದೆ ಬಂದಿತು.

‍ಲೇಖಕರು Avadhi GK

March 20, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: