ಕರಾವಳಿಗರ ಬುದ್ಧಿವಂತಿಕೆಗಿಂತ ನಮ್ಮ ದಡ್ಡತನವೇ ನೆಮ್ಮದಿ ಅನಿಸ್ತಾ ಇದೆ..

 

 

 

 

ಅಮರನಾಥ್  

 

 

 

 

ನಮ್ಮದು ಆಗಿನ ಕೋಲಾರ, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಊರು..

ಶೈಕ್ಷಣಿಕ ಫಲಿತಾಂಶಗಳ ಆಧಾರದಲ್ಲಿ ಹೇಳೋದಾದರೆ ನಾವು ಅತ್ಯಂತ ದಡ್ಡರು..

ಅಂದಹಾಗೆ, ನಮ್ಮ ಎರಡೂ ಜಿಲ್ಲೆಗಳಲ್ಲಿ ಸಾಕಷ್ಟು ಮುಸಲ್ಮಾನರಿದ್ದಾರೆ… ಅದರಲ್ಲಿ ಬಹುತೇಕರು ಹಿಂದೂ ಹಬ್ಬಗಳು ಬಂದಾಗಲೂ ಸಂಭ್ರಮಿಸ್ತಾರೆ.. ಇನ್ನು ಮುಸಲ್ಮಾನರ ಬಾಬಯ್ಯನ ಹಬ್ಬವನ್ನ ಹಿಂದೂಗಳೇ ಇಲ್ಲಿ ಆಚರಿಸೋದು.. ಮುಸಲ್ಮಾನರ ಉರುಸ್ ಗೆ ಹಿಂದೂಗಳು ಸಪೋರ್ಟ್ ಮಾಡಿದರೆ, ಎಷ್ಟೋ ಹಳ್ಳಿಗಳಲ್ಲಿ ಗಣೇಶನನ್ನ ಕೂರಿಸೋದು ಮುಸ್ಲಿಂ ಯುವಕರು…

ಇನ್ನು ನಮ್ಮ ಭಾಗದ ಸಾಕಷ್ಟು ಮುಸಲ್ಮಾನರಿಗೆ ಉರ್ದುನೇ ಬರೋದಿಲ್ಲ.. ಬಂದರೂ ಮಾತನಾಡುವುದು ಕಡಿಮೆ… ಬುರ್ಖಾ ತೊಡುವುದು, ಟೋಪಿ ಧರಿಸುವುದು ಕೂಡಾ ಅಪರೂಪ… ಇನ್ನು ಹಿಂದೂಗಳು ಕೂಡಾ ತಮ್ಮ ಆಚರಣೆಗಳೇನಿವೆಯೋ ಅವನ್ನು ಮಾಡಿಕೊಂಡು ಹೋಗುತ್ತಾರೆ..

 

ಎಲ್ಲೂ ನಾನು ಹಿಂದೂ, ನಾನು ಹಿಂದೂ ಧರ್ಮವನ್ನು ರಕ್ಷಿಸ್ತೀನಿ ಅಂತ ಓಡಾಡೋದಿಲ್ಲ… ಅದಕ್ಕೇ ಇಲ್ಲಿ ಯಾವುವೂ ಅಧರ್ಮಗಳಾಗಿಲ್ಲ..

ಆದರೆ ನಾವು ಶೈಕ್ಷಣಿಕವಾಗಿ ದಡ್ಡರು… ಮೊದಲು ಪರೀಕ್ಷಾ ಫಲಿತಾಂಶಗಳು ಬಂದಾಗ ನಾವು ಎಷ್ಟು ದಡ್ಡರು ಅಂತ ನನಗೆ ಬೇಸರವಾಗುತ್ತಿತ್ತು.. ಆದರೆ ಈಗ ಕರಾವಳಿಗರ ಬುದ್ಧಿವಂತಿಕೆಗಿಂತ ನಮ್ಮ ದಡ್ಡತನವೇ ನೆಮ್ಮದಿ ಅನಿಸ್ತಾ ಇದೆ….

ಅಂದಹಾಗೆ, ನಿಮಗೆ ಗೊತ್ತಿರಲಿ.. ನಮ್ಮಲ್ಲಿ ಆರ್ ಎಸ್ ಎಸ್, ಭಜರಂಗದಳಗಳು ಇಲ್ಲ, ಪಿಎಫ್ಐ ಇರೋದಿರಲಿ, ಅದರ ಹೆಸರನ್ನ ಎಷ್ಟೋ ಜನ ಕೇಳೇ ಇಲ್ಲ…

‍ಲೇಖಕರು avadhi

January 11, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. sajeev2000

    Please don’t advertise 🙂 . People with dirty minds will be waiting to open the sanga /P.F.I .

    Just silently pray let the current situation continue forever ( excluding daddatana 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: