’ಕದನ ಕುತೂಹಲಕೆ ಇದು ಸಮಯವಲ್ಲ..’ – ಯು ಮಹೇಶ್ವರಿ ಕವಿತೆ

ಬಾಳಯಾತ್ರೆ

ಮಹೇಶ್ವರಿ ಯು

ನರೆಕೂದಲೊಂದೊಂದು ಹಣಿಕಿಹಾಕುವ ವೇಳೆ
ಕದನ ಕುತೂಹಲಕೆ ಇದು ಸಮಯವಲ್ಲ
ಮಕ್ಕಳೊಂದಿಗರಾಗಿ ಮನೆಯೊಡೆಯರಾಗಿ
ಹದಬೆಂದ ದಾಂಪತ್ಯ ಸಮನಿಸಲಿ ಸೌಖ್ಯ
 
ಬಾಳ ಕುಲುಮೆಗಳಲ್ಲಿ ಬೆಂದು ಮಾಗಿದರಾಗಿ
ಕಟುಕರೋಹಿಣಿ ಮದ್ದು ಮೆದ್ದವರೆ ಆಗಿ
ಕೋಡುಗಳ ತಿವಿತಕ್ಕೆ ಗುಟುರುಗಳ ದಾಂಧಲೆಗೆ

ಸಹವಿದಾಯವ ಹೇಳಿ ವಿಶ್ವಾಸ ತಳವೂರಿ
ಸಹಪಾಕ ಸಮಭೋಗ ಸಮದು:ಖದಾಟದಲಿ
ಸಹಯಾತ್ರಿ ಸಂಗತಿಗೆ ಇಟ್ಟ ಹೆಜ್ಜೆ
 
ಭೋರೆಂದು ಸುರಿಯುತಿಹ ಅಮೃತವರ್ಷಿಣಿ ಧಾರೆ
ಅಹಂಕಾರದಡ್ಡೆಗಳ ಕೊಚ್ಚಿ ಕೆಡವಿ
ಭಾವಗಂಗಾಸಲಿಲ ನಿರ್ಮಲವು ನಿಷ್ಕಳವು
ಬಾಳಯಾತ್ರೆಗೆ ಇರುವುದೊಂದೆ ದಾರಿ..

‍ಲೇಖಕರು G

November 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: