ಕಣ್ಣೀರಿಗೆ ಕೆನ್ನೆಗಳುಂಟು ಜಾರಲು..

ಶಾಪ ಉಶ್ಯಾಪ  

ಅನಿತಾ ಗೌಡ

  

ಎಲ್ಲ ಪಾಪಕ್ಕೂ ಒಂದು ಪರಿಹಾರವುಂಟು

ಎಲ್ಲ ಶಾಪಕ್ಕೂ ಒಂದು ಬಿಡುಗಡೆಯುಂಟು

ಯಾವ ಮರುಭೂಮಿಯಾದರು ಇರುವುದು ಅದಕೊಂದುಎಲ್ಲೆ

ಯಾವ ಕಾಯಿಲೆಯಾದರೂ ಸಿಗುವುದು ಅದಕೊಂದು  ಔಷದಿ

ಎಷ್ಟೊಂದು ಸೂಫಿ ಸಂತರು ಆಗಿಹೋದರು

ಎಷ್ಟೊಂದು ಶರಣರು ಬಾಳಿ ಬದುಕಿದರು.

ಇಲ್ಲವಾದ ಸೂಫಿಗಳು ದರ್ಗಾಗಳಾದರು

ಕಾಲವಾದ ಶರಣರು ಸ್ಥಾವರಗಳಾದರು

ಹನಿದ ಕಣ್ಣೀರಿಗೆ ಕೆನ್ನೆಗಳುಂಟು ಜಾರಲು

ಮಾತುಬಾರದದ ಮೂಗನಿಗೂ ನೋವ ನುಡಿಯಲು ಕೊರಳುಂಟು

ಸ್ಮಶಾನಗಳಿವೆಯೆಂದು ಯಾರೂ ಸಾಯುವುದಿಲ್ಲ

ಸಾಯುವವರಿಗಾಗಿಯೇ ಬಿದಿರು ಬೆಳೆಯುವುದಿಲ್ಲ

 

‍ಲೇಖಕರು admin

May 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: