ಕಡು ದುಃಖದ ಸುದ್ದಿ…

ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ಅಗಲಿಕೆಗೆ ಅಶ್ರುತರ್ಪಣ.

ಡಿ ಎಸ್ ಚೌಗಲೆ

ಕಡು ದುಃಖದ ಸುದ್ದಿ ಬರಸಿಡಿಲಿನಂತೆ ಎರಗಿತು. ಜಿ.ಕೆ ಗೋವಿಂದರಾವ ಇನ್ನಿಲ್ಲವೆಂಬುದು ಒಂದರೆಕ್ಷಣ ನಂಬಲು ಅಸಾಧ್ಯ ಅನಿಸಿತು.ಯಾವ ಮುಲಾಜು ಇಲ್ಲದೆ ನೇರ ನಿಷ್ಠುರ ಚಿಂತನೆಗಳಿಂದ ಸಮಾಜವನ್ನು ಜಾಗರಗೊಳಿಸಿದವರು ಜಿಕೆಜಿ.

ರಂಗಭೂಮಿ, ಚಲನಚಿತ್ರ, ಅಧ್ಯಾಪನಗಳಲ್ಲಿ ತನ್ನದೇ ಛಾಪು ಒತ್ತಿದವರು. ಶೇಕ್ಸ್‌ಪಿಯರ್ ನ ನಾಟಕವೊಂದನ್ನು ಈಚೆಗೆ ರಂಗಾಯಣಕ್ಕೆ ನಿರ್ದೇಶಿಸಿದ್ದರು. ಅದೊಂದು ಬೃಹತ್ ಪ್ರೊಡಕ್ಷನ್. ಅವರ ಸಂಗಡ ನಾಲ್ಕು ವರ್ಷ ರಂಗಸಮಾಜದ‌ ಸದಸ್ಯನಾಗಿ ಕಳೆದ ಕ್ಷಣಗಳು ಬಹು ಅಮೂಲ್ಯವಾದವು. ನಮ್ಮೆಲ್ಲರ ಒಟ್ಟಿಗೆ ರಂಗಾಯಣ ಮತ್ತು ರಂಗಭೂಮಿಯ ಒಳಿತಿಗೆ ಅತ್ಯಂತ ಕಠೋರ‌ ನಿರ್ಣಯಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಚಿಂತಿಸುತ್ತಿದ್ದರು. ಹಾಗೆಯೇ ಶ್ರಮಿಸಿದವರು ಅವರು. ರಂಗಸಮಾಜದ ಸಭೆಗಳಲ್ಲಿ ಕಡಕ್ ಧ್ವನಿಯಲ್ಲಿ ವಿಚಾರ ಮಂಡಿಸುವ ಪರಿ ಅಬ್ಬಾ!!! ಅನುಕರಣೀಯವಾದುದು. ಅವರ ಜೊತೆಗೆ ಕಳೆದ ಪ್ರಸಂಗಗಳು ಒಂದೊಂದೆ ಸುರುಳಿಯಾಗಿ ಬಿಚ್ಚಿ ಎದುರು ನಿಲ್ಲುತ್ತಿವೆ. ಅಂಥ ಧೀಮಂತ ವ್ಯಕ್ತಿತ್ವ.

ಒಮ್ಮೆ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಹಮ್ಮಿದ ಶೆಕ್ಸಪಿಯರ್ ಕುರಿತ ಅವರ ಇಂಗ್ಲಿಷ್‌ ಉಪನ್ಯಾಸ ಅಮೋಘ, ಅದ್ಭುತ! ದಂಗುಗೊಳಿಸಿ ಶೆಕ್ಸಪಿಯರ್ ನ ಗುಂಗು ಹಿಡಿಸಿದ್ದರು.

2017 ರಲ್ಲಿ ನನ್ನ ಉದ್ವಸ್ಥ ನಾಟಕ ಬಿಡುಗೊಳಿಸಿ ತುಂಬಾ ಒಳ್ಳೆಯ ಮಾತಾಡಿದ್ದರು.

ನಾವು ಪರಸ್ಪರ ಬಹಳಷ್ಟು ಚರ್ಚೆಗಳನ್ನು ದೂರವಾಣಿಯಲ್ಲಿ ಮಾಡುತ್ತಿದ್ದೆವು. ಈಗ ಅವೆಲ್ಲ ಎಷ್ಟು ಮಹತ್ವದ ಆಲೋಚನೆಗಳು.ಅವು ಇನ್ನೆಲ್ಲಿ!!!
ಅವರನ್ನು ಕಳೆದುಕೊಂಡ ನಾವು ತೀರ ಬಡವರಾಗಿದ್ದೇ‌ವೆ.ಮನೆಯ ಹಿರಿಯನನ್ನು ಕಳಕೊಂಡ ದುಃಖ.ಇನ್ನು ಅವರ ಜನಪರ ಹೋರಾಟ, ಕಾರ್ಯ ಮತ್ತು ಸಾಧನೆಗಳು ನಮಗೆಲ್ಲ ದಾರಿಯ ಬೆಳಕು.

ಅವರಿಗೆ ಮನಃಪೂರ್ವಕ ನಮನಗಳು…

‍ಲೇಖಕರು Admin

October 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: