ಮಲ್ಲಿಕಾರ್ಜುನ ಹೊಸಪಾಳ್ಯ
ಪುಸ್ತಕ ಕೊಡುವ ಸಲುವಾಗಿ ಕಡಿದಾಳು ಶಾಮಣ್ಣನವರ ಮನೆಗೆ ನಾನು ಮತ್ತು ಗೆಳೆಯ ವೀರೇಶ್ ಇತ್ತೀಚೆಗೆ ಹೋಗಿದ್ದೆವು.
ಮಂಡಿಗೆ ಕಳಿಸಲು ಅಡಿಕೆ ಚೀಲ ತುಂಬಿಸುವ ಕೆಲಸ ನಡೆಯುತ್ತಿತ್ತು.
ಮಗಳ ಮನೆಗೆ ಪ್ರಯಾಣಿಸುವ ಗಡಿಬಿಡಿಯಲ್ಲಿದ್ದರೂ ಸುಮಾರು ಒಂದು ಗಂಟೆ ಮಾತಾಡಿದೆವು.
ತಮ್ಮ ಪುಸ್ತಕಗಳು, ಕ್ಯಾಮರಾ ತೋರಿಸಿ ಮನೆಯೆಲ್ಲಾ ಸುತ್ತಾಡಿಸಿದರು.
ಸರೋದ್ ನುಡಿಸಿದರು.
ಮೇಡಂ ಕೊಟ್ಟ ಬಾಳೆ ಹಣ್ಣು ಮತ್ತು ಬೂದಗುಂಬಳಕಾಯಿ ಹಲ್ವ ರುಚಿಯಾಗಿತ್ತು.
ಮತ್ತೊಮ್ಮೆ ಬರಲೇಬೇಕೆಂದರು. ಅತ್ಯಂತ ಖುಷಿ ಕೊಟ್ಟ ಘಳಿಗೆ.
0 ಪ್ರತಿಕ್ರಿಯೆಗಳು