ಒಳಗಿನ ಗುಟ್ಟು

ಕು ಸ ಮಧುಸೂದನ ರಂಗೇನಹಳ್ಳಿ

ಕಾಲವೇ ಸ್ತಂಭಿಸಿದಂತಿದ್ದ ಆ ಕ್ಷಣ
ಸರಿದು ಹೋಯಿತು
ಕನ್ನಡಿಯ ಗಾಜಿನ ಮೇಲೆ
ಗೋಲಿಯೊಂದು ಉರುಳಿ ಹೋದಂತೆ
ಹೇಗಾಯಿತು? ಯಾಕಾಯಿತು?
ಕೇಳಿದೆಲ್ಲ ಪ್ರಶ್ನೆಗಳಿಗೂ
ನಿರುತ್ತರವೇ ಕರಾರುವಾಕ್ ಉತ್ತರ

ಭವಿಷ್ಯದತ್ತ ಕಣ್ಣಿರಲಿ
ಭೂತದ ಗೊಡವೆ ಬೇಡ
ವರ್ತಮಾನದ ಉಪದೇಶ ಉಚಿತ
ಒಪ್ಪುಗಳ ಬರೆದಿಟ್ಟ ಇತಿಹಾಸದ ಪುಸ್ತಕಗಳನೋದು
ಇವೆಯೇ ತಪ್ಪುಗಳ ಕಿಂಚಿತ್ತಾದರೂ ಪ್ರಸ್ತಾಪ ನೋಡು

ತಾನು ಅಪರಾದಿಯೆಂದು
ಯಾವನೂ ಒಪ್ಪಿಕೊಳ್ಳುವುದಿಲ್ಲ
ನ್ಯಾಯಾಲಯದಲ್ಲಿರಲಿ
ಖಾಸಗಿಕ್ಷಣದಲ್ಲಿರಲಿ

ಪಡೆಯುವುದು ನಡೆದಿದೆ ನಿರಂತರ ಅನುಮಾನದ ಲಾಭ
ಬೆನ್ನು ತಿರುಗಿಸಿ ನಡೆದಷ್ಟೂ
ಬೆನ್ನು ಹತ್ತಿ ಬರುವ ಬೇತಾಳ
ಈ ಪ್ರಶ್ನೆಗಳು
ಮುಟ್ಟು ನಿಂತವಳಿಗಷ್ಟೆ ಗೊತ್ತು ಮುಟ್ಟಿಸಿಕೊಂಡ ಗುಟ್ಟು

‍ಲೇಖಕರು Avadhi

December 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: