ಸಚಿನ್ ಕುಮಾರ ಬ ಹಿರೇಮಠ
ನಾಲ್ಕು ಬಾಹು
ನಾನು, ನೀನು
ಆನು, ತಾನು
ಎಂಬೀ ಹೆಸರಿನ ಆಯತವಷ್ಟೇ
ಬದುಕು ಎಂದು
ನಂಬಿಕೊಂಡು
ಬದುಕುತ್ತಿದ್ದೆ.
ಆವರಿಸಿತಾಗೊಂದು
ಪರಿಧಿ
ಇದಕ್ಕಿಂತಲೂ ಮೇಲು
ಬೇರೇನಿದ್ದರೂ ಎಲ್ಲ ಒಂದೇ
ಎಂಬಂತೆ ಶೂನ್ಯ.
ಎಲ್ಲರೊಳಗೊಂದಾಗಿ
ಪರಿಧಿಯಾಗುವುದೇ
ಮನುಜ ಮತ
ಎಂಬ ಸತ್ಯ ಕಕ್ಕಿತು
ಆ ವೃತ್ತ
ಮೌನ ಸಂವಾದತ್ತ.
ನಿರ್ಲಿಪ್ತತೆಗೂ ಮುನ್ನ
ಈ ಪರಿಧಿಯ
ಮತ್ತೊಂದು ಪರಿಧಿ ನುಂಗಿತು
ಅದೋ ವಿಶ್ವ ಪಥ
ನಾಕುತಂತಿಯ
ದನಿ ನಾದಮಯ.
ನಾಲ್ಕಕ್ಕೆ ಮೂಲ
ಒಂದು
ಒಂದರಳೊಗೊಂದೊಂದು.
0 ಪ್ರತಿಕ್ರಿಯೆಗಳು