ಕರುಣೆಯ ಕೂಗು ಮಾತ್ರ ಹಾಕಬಲ್ಲೆ..

beeru_devarmaniಬೀರು ದೇವರಮನಿ

ಯಾಕೆ ನೀ ಅಲ್ಲಿಗೋದೆ
ಇಲ್ಲಿರಲು ಬೇಸರವಾಯಿತೇ
ನಿನ್ನ ಬದುಕಿನ ಅವಸ್ಥೆ ಹೀಗೆ ಮಾಡಿರಬೇಕು
ದಿಕ್ಕೆಟ್ಟ ನಿರ್ಜನ ಪ್ರದೇಶದಲ್ಲಿ ಕಗ್ಗತ್ತಲದೇ ಆಡಳಿತ.

ನಿನ್ನ ಹುಡುಕಬಂದೆclick-kavte4
ನಿನ್ನ ಜೊತೆ ಕೂಡಿ ಮಾತಾಡಬೇಕಂದೆ
ಕ್ಷಣ ಮುನ್ನ ನೀ ಅವರ ತೆಕ್ಕೆಗೆ ಬಿದ್ದು ಬಿಟ್ಟೆ
ಕೆಡುಕು ಕಣ್ಣಿನಲಿ  ಕತ್ತಿ ಮಸೆವವರ ಪಾಲಾಗಿಬಿಟ್ಟೆ
ಕಟ್ಟು ಪಾಡಿನ ಕೆಡುಕುತನ ಪಟ್ಟು ಹಿಡಿದು ನೂಕುತ್ತವೆ
ಪಾಪ ಕೂಪದ ಬಾವಿಗೆ ತಳ್ಳಿ ಗಹ ಗಹಿಸಿ ನಗುತ್ತವೆ.

ಅನಿಷ್ಠ ಪದ್ಧತಿಯ ಅಮಲಿನಲ್ಲಿ ತೇಲುವವರದೆ ಕುತಂತ್ರ
ಥೂ ಹೇಡಿ ಮುಖಗಳು, ಕರುಣೆಯಿಲ್ಲದ ಕುಖ್ಯಾತಿಗಳು
ಕೀಳು ಜಾತಿಯ ಕುಲಗೇಡಿಗಳು
ಕರುಳ ಬಳ್ಳಿಯನ್ನೇ ಕತ್ತರಿಸಿ ತಿನ್ನುವ ಕಿಂಕರರು
ಅದೆಷ್ಟು ಬಾವಲಿಗಳು, ರಕ್ತ ಹೀರುವ ಸೊಳ್ಳೆಗಳು ಮುತ್ತಿಗೆ ಹಾಕಿ ನಿನ್ನ ಹೊಸಕಿ ಹಾಕುತ್ತವೆ
ನೀ ಹೋಗಬಾರದಿತ್ತು ಅತ್ತ
ಕಾಮುಕರ ಕಣ್ಣಿಗೆ ನಿನ್ನ ದೃಷ್ಟಿ ತಾಗಬಾರದಿತ್ತು.

ಕಾಳ ಕತ್ತಲೆಯಲಿ ನಿನ್ನತ್ತ ನಾ ಹೇಗೆ ಬರಲಿ
ಷಡ್ಯಂತ್ರ ಹೂಡಿ ಆ ದುಷ್ಟರಿಂದ  ನಿನ್ನ ಹೇಗೆ ಬಿಡಿಸಲಿ
ನಿನ್ನ ಪ್ರಖರ ಕೈ ಬೆರಳುಗಳಷ್ಟೇ ನೋಡಬಲ್ಲೆ
ಆ ಸಪೂರ ಬೆರಳುಗಳಿಗಷ್ಟೇ ಮುತ್ತನಿಟ್ಟು
ಸಮಾಧಾನ ತರುವ ಧೈರ್ಯದ ಮಾತುಗಳ ಮಾತ್ರ ಪಿಸುಗುಟ್ಟಬಲ್ಲೆ
ಮೂಕ ಸಂವೇದಿಯಾಗಿದ್ದೇನೆ ನಿನ್ನ ಅವಸ್ಥೆಯ ಕರುಣಾಜನಕ ಕೂಗನ್ನು ಮನಸ್ಸಿನಲ್ಲಿ ಬಿಗಿದಿಟ್ಟು ಆಗಾಗ ಕಂಪಿಸುತ್ತೇನೆ.

‍ಲೇಖಕರು Admin

October 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: