ಏಕತಾರಿಯಿಂದ ಹೊರಟ ಮಧುರತೆ..

ರಾಮಾಯಣ

ಕೃಷ್ಣ ದೇವಾಂಗಮಠ

ಉರಿವ ಜ್ವಾಲೆಯಲಿ ನಿಂತ ಸೀತೆಗೆ
ಅರೆಬೆಂದ ಪುರುಷ ದೇಹ ಕಾಣಿಸಿತು
ಲಕ್ಷ್ಮಣ, ಮೈ ಸುಟ್ಟುಕೊಂಡ ಆ ಆಕೃತಿಗೆ ರಾಮನೆಂದ,

ಅಗ್ನಿ ನಂದಿಹೋಯಿತು
ಉಟ್ಟ ಬಟ್ಟೆಯೂ ಸುಡದಿದ್ದ ಕಂಡ
ಸುತ್ತಲಿದ್ದವರೆಲ್ಲಾ ಉರಿದು ಹೋದರು

ನಡುವಿನಂತೆ ಬಳುಕುತ್ತ ಹರಿವ ನದಿಗೆ
ಹೊಕ್ಕುಳಾಕಾರದ ಭಾರೀ ಸುಳಿ
ಹೆಣ್ಣಿನವತಾರ, ಕಾಮನಬಿಲ್ಲ ರಂಗು
ಎದೆಯಂತೆ ಸೆಟೆದ ಬಿಲ್ಲಿಗೆ
ಕಾಮ ಬಾಣ ಹೂಡಿ ಸ್ವರ್ಗಕ್ಕೆ ಹೊಡೆ

ಏಕತಾರಿಯಿಂದ ಹೊರಟ ಮಧುರತೆ
ನರಕಕ್ಕೆ ತಲ್ಲಣಿಸಲಿ
ಭೂಮಿ ಧಗಧಗ ದಹಿಸುವಂತೆ ಸುರಿಯಲಿ
ಅಗ್ನಿ ಛೇದಿಸಿ ಹೊರಟ ಬಾಣಗಳ ಮಳೆ
ಹೊತ್ತಿ ಉರಿಯಲಿ ರಾವಣನ ಕೆಡುಕು
ಉಳಿಯಲಿ ಲಂಕೆ  ಮತ್ತದೇ ರಾವಣ
ಜೊತೆಗೆ ಮಿಕ್ಕ ಪಾತ್ರಗಳ ಮೆದುತನ
ಭೂಮಿಯ ಧೀರ್ಘಾಯುಷ್ಯದುದ್ದಕ್ಕೂ

‍ಲೇಖಕರು admin

March 19, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: