ಮಕ್ಕಳ ಸಾಹಿತ್ಯಕ್ಕೆ ಮುಗುಳ್ನಗೆ ತಂದು ಕೂರಿಸಿದ ಪಳಕಳ ಸೀತಾರಾಮ ಭಟ್ ಅವರು ಇನ್ನಿಲ್ಲ.
ನನ್ನ ಅಪ್ಪ ಇಷ್ಟೆತ್ರ
ನನ್ನ ಅಮ್ಮ ಇಷ್ಟೆತ್ರ
ನಾನು ಮಾತ್ರ ಇಷ್ಟೇ ಎತ್ರ, ಯಾಕೋ ಗೊತ್ತಿಲ್ಲ
ಎನ್ನುವ ಕವಿತೆ ಕೇಳದವರಿಲ್ಲ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಮನ್ನಣೆಗೂ ಪಾತ್ರರಾಗಿದ್ದ ಸೀತಾರಾಮ ಭಟ್ ಅವರ ಅಪರೂಪದ ಛಾಯಾಚಿತ್ರಗಳು ಇಲ್ಲಿವೆ.
ಕನ್ನಡ ನಾಡು ಕಂಡ ಇನ್ನೊಬ್ಬ ಮಹತ್ವದ ಛಾಯಾಚಿತ್ರ ಕಲಾವಿದ ಎ ಎನ್ ಮುಕುಂದ್ ಅವರು ತೆಗೆದ ಚಿತ್ರಗಳಿವು
ಅವರ ಸಾವಿನ ಸುದ್ದಿ ಕನ್ನಡ ದಿನ ಪತ್ರಿಕೆಗಳ ಒಳಗಿನ ಪುಟಗಳಲ್ಲಿ ಸಮಾಧಿಯಾಯಿತು. ಟಿ ವಿ ಚಾನಲ್ ಗಳಲ್ಲಿ ಅದು ಸುದ್ದಿ ಆಗಲೇ ಇಲ್ಲ.’ಅವಧಿ’ ಅವರಿಗೆ ನೀಡಿದ ಕವರೇಜ್ ನೋಡಿ ಸಮಾಧಾನವಾಯಿತು.