ಎಷ್ಟು ಚಂದ ನೀವು ಮರಳಿ ಬಂದರೆ..

t-card1b

-ಅಜಿತ್ ಎಸ್ ಕೌಂಡಿನ್ಯ

ಹಿಡಿದದ್ದು ಕೈಯಲ್ಲೊಂದು ಕೋವಿ
ಕುತ್ತಿಗೆಗೆ ನೇತುಬಿದ್ದದ್ದು ಕ್ಯಾಮೆರ
ಬಿಳಿ ಕುರುಚಲು ಈ ಗಡ್ಡಧಾರಿ
ಹಿಡಿದ ದಾರಿ ಶಿಕಾರಿ

ಅಲೆದಾಡುತ ಕಾಡೆಲ್ಲಾ
ಮುಂದೆ ಮುಂದೆ ಕಿವಿ
ಹಿಂದೆ ಗುರು ತೇಜಸ್ವಿ

ಮನೆ ಹಿಂದೆಯೇ ಇದ್ದ ಕೆರೆ
ಇವರಿಗೆ ಪಕ್ಷಿವೀಕ್ಷಣೆಯ ತಾಣ
ಭಾದ್ರಾ ನದಿ ದಂಡೆಯಲಿ
ಮೀನಿಗೆ ಗಾಳದ ಬಾಣ

‘ನಿರುತ್ತರ’ದ ನಾಯಕ
ಕರ್ವಾಲೊ, ಪರಿಸರದ ಕಥೆ, ಮಾಯಾಲೋಕ,
ರಚಿಸಿದ್ದಾರೆ ಅದೆಷ್ಟೋ
ಕಥೆ, ಕಾದಂಬರಿ ನಾಟಕ

ಮೂಕಾಗಿದೆ ನೀವಿಲ್ಲದ ಮೂಡಿಗೆರೆ
ಎಷ್ಟು ಚಂದ ನೀವು ಮರಳಿ ಬಂದರೆ!


‍ಲೇಖಕರು avadhi

April 2, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. prakash hegde

    ವಾವ್…! ಕೌಂಡಿನ್ಯ…!

    ತೇಜಸ್ವಿಯವರನ್ನು ಚೆನ್ನಾಗಿ ಚಿತ್ರಿಸಿದ್ದೀರಿ…

    ಅವರ ನೆನಪು ಬಹುವಾಗಿ ಕಾಡುತ್ತದೆ ಅಲ್ಲವೇ..?

    ಚಂದದ ಕವನಕ್ಕೆ

    ಅಭಿನಂದನೆಗಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: