ಗೋಪಾಲ ವಾಜಪೇಯಿ ಅವರ ಅಕಾಲಿಕ ನಿಧನಕ್ಕೆ
ಗುಲ್ಜಾರರ ಹಾಡಿನ ಕಂಬನಿಯ ಮಳೆ
ಲಕ್ಷ್ಮೀಕಾಂತ ಇಟ್ನಾಳ
ಎತ್ತದಿರು ಇನ್ನೂ, ನನ್ನ ಗೆಳೆಯನ ಶವವನ್ನುಬೆಚ್ಚಗಿದೆ ಇನ್ನೂ ಈ ಮಣ್ಣು, ದೇಹವೂ ಇನ್ನೂ.ಸಿಲುಕಿದೆಯೇನೋ ಉಸಿರು, ತೆರೆದು ನೋಡಿರೊ ಇನ್ನೂ
ತುಟಿವರೆಗೂ ಬಂದ ಮಾತು, ಆಡಲಿ ಇರು ಇನ್ನು
ನೋವಲಿ ನರಳಿದಂತಿದೆ, ನೋಡಿ ಇದೆಯೇ ಜೀವವಿನ್ನೂ.ಎತ್ತದಿರು ಇನ್ನೂ, ನನ್ನ ಗೆಳೆಯನ ಶವವನ್ನು…
ಎಬ್ಬಿಸಿರೊ ಅವನ ತಬ್ಬಿ ಹೇಳೋಣ, ವಿದಾಯವನ್ನು
ಇದೆಂಥ ಬೀಳ್ಕೊಡುವುದು, ಇದೆಂಥ ಪದ್ಧತಿಯ ಮಣ್ಣು
ಎದೆಯ ಪ್ರತಿ ಗಾಯವೂ, ಹಸಿಯಾಗಿವೆ ಇನ್ನೂ.
ಎತ್ತದಿರು ಇನ್ನೂ, ನನ್ನ ಗೆಳೆಯನ ಶವವನ್ನು
ಬೆಚ್ಚಗಿದೆ ಇನ್ನೂ ಈ ಮಣ್ಣು, ದೇಹವೂ ಇನ್ನೂ.
ಗುಲ್ಜಾರ್ ಹಾಡಿಗಾಗಿ ಕ್ಲಿಕ್ ಮಾಡಿ





itnaLaji namaste..kNtumbi bantu..