ಎಚ್ ಆರ್ ರಮೇಶ
ಅರಾಜಕತೆ ಸೃಷ್ಟಿಯಲಿ ಅದೊಂದು ಲಾಸ್ಯ,
ಸೌಂದರ್ಯವೇ
ಅನ್ನ ಬೇಯುವ ಮಡಿಕೆ
ಚಕ್ರದಲ್ಲಿ
ಧೂಳ ಕಣಗಳ ಘನ ಮೆದು ಮಣ್ಣ ಮಡಿಕೆ
ಸೂರ್ಯನೂ ಆ ಬಗೆಯಲಿ
ಅರಾಜಕತೆಯ ರಾಶಿಯಲಿ
ಒಂದು ಕಣ
ಅಲ್ಲೇ ಛಂಧದ ಬಂಧ
ಏನು ಬೇಡವೋ ಅದು ಅಸ್ತಿತ್ವವಾಗಿಯೇ ಅಳಿದು
ಬೇಕಾಗುವ ಅಸ್ತಿತ್ವ
ಆದರೂ ಛಂಧವಾಗಿರುವ
ಬೆಳಕೇ
ಇದ್ದಿಲು
ಬೂದಿ
ಕಣ ಕಣ
ಅಣು ಅಣುವಿನ ಅನುಬಂಧ
ಯಾವುದು ಬೇಕು ಯೂವುದು ಬೇಡ
ಚಿಂತೆ ಭಾಶೆಯದು
ಅದರ ನೋವು ಮಾತ್ರ ಅನವರತ
ಸೃಷ್ಟಿ ನಿಶ್ಚಿಂತ
ಇಂದೂ ಇಲ್ಲದೆ ಹಿಂದಿಲ್ಲದೆ
ಮುಂದನು ತಲುಪದೆ.
ಬಂಧದಿಂದಲೇ ಬಯಲು
ಗೂಡೊಳಗೆ ಅಂಗುಲದಲಿ ಸಾಗಿ
ರೆಕ್ಕೆ ಮೂಡಿ ಆಕಾಶ.
0 ಪ್ರತಿಕ್ರಿಯೆಗಳು