ಉರಿಯುವುದಾದರೆ ಉರಿಯಲಿ ಬಿಡು..

ಉರಿ

ಅರ್ಪಣಾ ಮೂರ್ತಿ

ಉರಿಯುವುದಾದರೆ ಉರಿಯಲಿ ಬಿಡು,
ಅಪ್ರಯೋಜಕ ಜನ ಇನ್ನೇನು ತಾನೇ ಮಾಡಿಯಾರು,
ಉರಿದುರಿದು ಬಿದ್ದ ಅವರೊಡಲ ಬೂದಿ ಗೊಬ್ಬರವಾದರೂ ಆದೀತು
ನಾಳಿನ ನಿನ್ನ ಏಳಿಗೆಯ ಚಿಗುರಿಗೆ,

ನಿನ್ನೆಡೆ ಇಣುಕಿ ಅಣಕಿಸಿ ಕುಣಿಯುವುದಾದರೆ ಕುಣಿಯಲಿ ಬಿಡು,
ನಿನ್ನ ಉನ್ನತಿಯ ಸಂಭ್ರಮಕೆ ನರ್ತಕರು ಸಿಕ್ಕಿಯಾರು,
ಅವರೆಡೆಗೆ ನೀ ಇಣುಕುವಷ್ಟು
ವಿಶೇಷತೆಯೇನಿಲ್ಲ ಅವರಲ್ಲಿ,

ಅವರು ಹಾರುವುದಾದರೆ ಹಾರಲಿ ಬಿಡು,
ನೀ ನೆಲದಿ ಗಟ್ಟಿಯಾಗಿ ಬೇರೂರು ಸಾಕು,
ಹಾರಿ ಚೀರಿ ಮೇಲಕೇರಿ ಸೋತು
ಕೊನೆಗೊಮ್ಮೆ ನಿನ್ನ ಪಾದದ ಬುಡ ತಲುಪಲೆಬೇಕು….

 

‍ಲೇಖಕರು avadhi

December 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. D.M.NADAF

    ಅವರೆಡೆಗೆ ನೀ ಇಣುಕುವಷ್ಟು ವಿಶೇತೆಯೇನಿಲ್ಲ ಅವರಲ್ಲಿ, ಹಾರುವದಾದರೆ
    ಹಾರಲಿ ಬಿಡು,ಈ ನೆಲದಿ ಗಟ್ಟಿಯಾಗಿ ಬೇಲೂರು
    ಕವಿ ನೀಡಿದ ಕಾಲದ ಕರೆಯಂತಿದೆ
    ಅಭಿನಂದನೆಗಳು .
    ಡಿ.ಎಮ್ ನದಾಫ್ ಅಫಜಲಪುರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: