ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯ್ ಇಟಗಿ ಅನುವಾದಿಸಿದ ಕೆ ಸಚ್ಚಿದಾನಂದನ್ ಕವಿತೆ

ಪ್ರೀತಿ ಈ ದಿನಗಳಲ್ಲಿ ಹೇಗೆ ಸಾಯುತ್ತದೆ?

ಉದಯ್ ಇಟಗಿ

ಪ್ರೀತಿ ಕೂಡಾ ಈ ದಿನಗಳಲ್ಲಿ
ಕಾಗೆಗಳು ಸತ್ತಷ್ಟೇ ಸುಲಭವಾಗಿ ಸಾಯುತ್ತದೆ.
ನಾವು ಒಬ್ಬರೊನ್ನೊಬ್ಬರು ನೋಡುವದನ್ನು ಯಾವಾಗ
ನಿಲ್ಲಿಸುತ್ತೇವೆ ಎಂಬುದು ನಮಗೇ ಗೊತ್ತಿರುವದಿಲ್ಲ.
ಒಂದು ಕಾಲಕ್ಕೆ ನಿಮ್ಮ ಮೈ-ಮನಸ್ಸುಗಳನ್ನು ಮುದಗೊಳಿಸುತ್ತಿದ್ದ ಆ ಹೆಸರು
ಈಗ ಕಿರಿಕಿರಿಯೆನಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವದಿಲ್ಲ.
ಅವಳಿಗಿಟ್ಟ ಮುದ್ದುಮುದ್ದಾದ ಹೆಸರುಗಳೆಲ್ಲಾ
ಶಬ್ಧಕೋಶದಿಂದಲೇ ಅಳಿಸಿಹೋಗುತ್ತವೆ.
ನಾವು ಒಂದೊಮ್ಮೆ ಅವಳಿಗಾಗಿ ಬರೆಯುವದಕ್ಕೋಸ್ಕರ ಸೃಷ್ಟಿಸಿದ
ಸುಳ್ಳುಸುಳ್ಳು ಯೂಸರ್ನೇಗಮ್ ಮತ್ತು ಪಾಸ್ವತರ್ಡ್ಗದಳನ್ನು ಕಂಪ್ಯೂಟರ್ ಸಹ ಮರೆತುಬಿಡುತ್ತದೆ.
ಟೈಪಿಸಿಟ್ಟ ಮೆಸ್ಸೇಜ್ಗೆಳು ವಿದ್ಯುತ್ ಸಂಪರ್ಕ ಕಡಿತಗೊಂಡು
ಕಣ್ಮರೆಯಾಗುತ್ತವೆ.

ದಿನಕ್ಕೆ ಮೂರು ಬಾರಿ ನೋಡುತ್ತಿದ್ದ
ಅವಳ ಫೇಸ್ಬುರಕ್ ಪೇಜ್
ಈಗ ಎಲ್ಲೋ ಮೂಲೆಯಲ್ಲಿ ಮಿನುಗುವ ನಕ್ಷತ್ರ.
ಒಂದೊಮ್ಮೆ ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸಿದ ಅವಳ ದನಿ
ಈಗ ಗಾಳಿಯಲ್ಲಿ ಎಲ್ಲಿಂದಲೋ ತೇಲಿಬರುವ ಹಾಡು.
ಅವಳ ವಾಸನೆ ನೀವು ಬಾಲ್ಯದಲ್ಲಿ
ಬೆಟ್ಟಗುಡ್ದಗಳ ಸಾಲಿನಲ್ಲಿ ಓಡಾಡುವಾಗ
ತಟ್ಟನೆ ಪ್ರತಿಫಲಿಸಿದ ಒಂದು ಹೆಸರಿರದ ಹೂವು.
ಅವಳ ಸ್ಪರ್ಶ ದಾರಿ ಪಕ್ಕದ ಗಿಡವೊಂದು
ನಿಮ್ಮ ಅಂಗಿಗೆ ತಗುಲಿದ ಹಾಗೆ.
ಈಗ ಅವಳ ಹೆಸರು ಮಳೆನೀರಲ್ಲಿ ಕೊಚ್ಚಿ
ಸಾಗರದಲ್ಲಿ ಲೀನವಾಗಿ,
ನಿಶ್ಚಿತ ಉನ್ಮತ್ತ ಮಧ್ಯಾಹ್ನಗಳ ಬಿಸಿಲಿನಲ್ಲಿ,
ಅಲೆಗಳ ಅಂಚಿನಲ್ಲಿ,
ಕತ್ತಿಯ ಅಲಗಿನಂತೆ ಹೊಳೆಯುತ್ತಿದೆ.
 
ಮೂಲ ಮಲಯಾಳಂ: ಕೆ. ಸಚ್ಚಿದಾನಂದನ್
ಇಂಗ್ಲೀಷಿಗೆ: ಕೆ. ಸಚ್ಚಿದಾನಂದನ್
ಕನ್ನಡಕ್ಕೆ: ಉದಯ್ ಇಟಗಿ
 
 
 

‍ಲೇಖಕರು G

5 December, 2014

4 Comments

  1. mmshaik

    uttama kavite…

  2. Ahalya Ballal

    Nice!

  3. deepthi

    very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading