ಯುನಿವರ್ಸಿಟಿ ಮುಖ್ಯಸ್ಥರು ಕರೆಸಿದ್ದರು..
ಎಂ ಎಸ್ ಕೃಷ್ಣಮೂರ್ತಿ ಗೀತಾ
ಯುನಿವರ್ಸಿಟಿ ಮುಖ್ಯಸ್ಥರು ಕರೆಸಿದ್ದರು
ಯುನಿವರ್ಸಿಟಿ ಸುತ್ತಲೂ ಮುಳ್ಳು ತಂತಿ ಬೇಲಿ ಹಾಕಿಸಲು
ಕೇಳಿದೆ ಎಷ್ಟು ಎತ್ತರಕ್ಕೆ
ಹೇಳಿದರು
ಎತ್ತರೆತ್ತರಕ್ಕೆ ಮುನುಷ್ಯ ಹಾರಿ ದಾಟಲಾರದಷ್ಟು
ಕೇಳಿದೆ
ಮುಳ್ಳುಗಳು ಈಗೀಗ ತುಂಬಾ ಚೂಪಾಗಿವೆ ಪರವಾಗಿಲ್ಲವೇ
ಹೇಳಿದರು
ಓಹೋ ಒಳ್ಳೆಯದಾಯಿತು ಒಳಗಿರುವವನು ಹೊರಗೋಗಲಿಕ್ಕಾಗದು
ಹೊರಗಿರುವವನು ಒಳ ಬರಲಾಗದು ಚುಚ್ಚಿಕೊಂಡು ಸಾಯಬೇಕು
ಕೇಳಿದೆ
ಇದು ಜ್ಞಾನ ದೇಗುಲವಲ್ಲವೇ ಎಲ್ಲರೂ ಬರಬಹುದು ಹೋಗಬಹುದಲ್ಲವೇ
ಮುಳ್ಳುತಂತಿಯ ಬೇಲಿಯೇಕೆ
ಹೇಳಿದರು
ಹೌದು ಆದರೆ ನಾವು ಹೇಳಿದವರು ಮಾತ್ರ ಬರಬೇಕು
ನಮ್ಮ ಮಾತು ಕೇಳಬೇಕು
ನಾವು ಹೇಳಿದವರಿಗೆ ಜೈಕಾರ ಹಾಕಬೇಕು
ನಾವು ಹೇಳಿಕೊಟ್ಟ ಹಾಗೇ ಮಾತ್ರ ಹೇಳಬೇಕು
ಹಾಗಿದ್ದವರು ಬರಲಿ
ಒಳಗಿದ್ದವರು ಹಾಗೆ ಇರಲಾಗದಿದ್ದರೆ ಈ ಮುಳ್ಳುತಂತಿಯಾಚೆ ಹೋಗದಿರಲಿ…
ಕೇಳಿದರು
ನಿಮ್ಮ ಹೆಸರು
ಹೇಳಿದೆ
ಆಜಾದಿ
ಮತ್ತೇ ಕರೆಸಲಿಲ್ಲ…..
ನಿನ್ನೆ ಮಧ್ಯಾಹ್ನ ಅವರೇನ ಮಾಡಿದರು
ವಾರ್ಸನ್ ಶೈರ್
ಕನ್ನಡಕ್ಕೆ : ಸಂವರ್ತ ‘ಸಾಹಿಲ್’
ಸಂಬಂಧಿ ಓರ್ವರ ಮನೆಯನ್ನು ಭಸ್ಮಗೊಳಿಸಿದರು
ಟಿವಿಯಲ್ಲಿ ಅಳುವ ಹೆಂಗಸರಂತೆ
ರೋಧಿಸಿದೆ ನಾನೂ ಸಹ
ಐದು ರೂಪಾಯಿ ನೋಟು
ಮಧ್ಯದಲ್ಲಿ ಮಡಚಿದಂತೆ
ಬಾಗಿ.
ನನ್ನ ಪ್ರೇಮಿಸುವ ಹುಡುಗನಿಗೆ ಫೋನ್ ಮಾಡಿ
ಸ್ವರದಲ್ಲಿ ಸಮಾಧಾನ ತರಿಸಿಕೊಳ್ಳಲು ಯತ್ನಿಸುತ್ತಾ
“ಹಲೋ” ಎಂದೇ.
ಅವ ಕೇಳಿದ, “ವಾರ್ಸನ್, ಏನಾಯಿತು? ಏನಾಗಿದೆ?”
ನಾನು ಪ್ರಾರ್ಥಿಸುತ್ತಿದ್ದೇನೆ
ಮತ್ತು ಹೀಗಿದೆ ನನ್ನ ಪ್ರಾರ್ಥನೆ:
ದೇವರೇ
ಎರಡು ದೇಶಗಳಿಗೆ ಸೇರಿರುವೆ ನಾನು
ಒಂದು ದೇಶದ ಬಾಯಾರಿದ
ಮತ್ತೊಂದು ಹೊತ್ತಿ ಉರಿಯುತ್ತಿದೆ
ಎರಡೂ ದೇಶಗಳು
ನೀರಿಗಾಗಿ ಹಂಬಲಿಸಿವೆ.
ಅಂದು ರಾತ್ರಿ
ಭೂಪಟವನ್ನು ತೊಡೆಯ ಮೇಲಿರಿಸಿಕೊಂಡು
ಭೂಮಿಯ ಮೇಲೆಲ್ಲಾ ಬೆರಳಾಡಿಸಿ
ಪಿಸುಗುಟ್ಟಿ ಕೇಳಿದೆ
“ಎಲ್ಲಿ, ಅದೆಲ್ಲಿ ನೋವಾಗುತ್ತಿದೆ?”
ಅದು ಉತ್ತರಿಸಿತು:
ಎಲ್ಲೆಡೆ
ಎಲ್ಲೆಡೆ
ಎಲ್ಲೆಲ್ಲೂ.
“ಅಂದು ರಾತ್ರಿ
ಭೂಪಟವನ್ನು ತೊಡೆಯ ಮೇಲಿರಿಸಿಕೊಂಡು
ಭೂಮಿಯ ಮೇಲೆಲ್ಲಾ ಬೆರಳಾಡಿಸಿ
ಪಿಸುಗುಟ್ಟಿ ಕೇಳಿದೆ
“ಎಲ್ಲಿ, ಅದೆಲ್ಲಿ ನೋವಾಗುತ್ತಿದೆ?”
ಅದು ಉತ್ತರಿಸಿತು:
ಎಲ್ಲೆಡೆ
ಎಲ್ಲೆಡೆ
ಎಲ್ಲೆಲ್ಲೂ.”
ಸಂವರ್ತ, ಕೆಲವೊಂದನ್ನು ಅನುವಾದ ಮಾಡಲು ನಿಮಗಷ್ಟೇ ಸಾಧ್ಯ !!!
ಸ್ವಲ್ಪ ಅಸೂಯೆಯೊಡನೆ,
ಶಮ