ಚರಿತಾ
‘ಬಾಹುಬಲಿ’ ಅತ್ಯುತ್ತಮ ಚಿತ್ರ !
ಈ ಪ್ರಶಸ್ತಿಯ ಮೂಲಕ ಅದರಲ್ಲಿರುವ ಹಿಂಸೆ, ಜನಾಂಗೀಯ ದ್ವೇಷದ ಚಿತ್ರಣವನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದಹಾಗಾಯ್ತಷ್ಟೆ.
‘ಬಾಹುಬಲಿಯ 2 ನೇ ಭಾಗ ಇನ್ನೂ ಚೆನ್ನಾಗಿರುತ್ತೆ’ ಅಂತ ಹೇಳ್ಕೊಂಡಿದಾರೆ ಅದರ ನಿರ್ದೇಶಕರು! ನಂಗ್ಯಾಕೊ ಭಯ ಆಯ್ತು.
‘ಚೆನ್ನಾಗಿರುತ್ತೆ’ ಅಂದ್ರೆ, ಇನ್ನೂ ಹೆಚ್ಚು ಹಿಂಸೆ, ರಕ್ತಪಾತ, ಬುಡಕಟ್ಟು ಜನಾಂಗದ ಮತ್ತಷ್ಟು ಅವಹೇಳನಕರ ಚಿತ್ರಣ ಇರುತ್ತೆ ಅಂತ್ಲ?! ಹಿಂಸೆಯೇ ಮನರಂಜನೆಯ ಸರಕು ಅಂತ ನಂಬಿರುವ ಇಂಥ ನಿರ್ದೇಶಕರು; ಅದನ್ನು ಪ್ರೋತ್ಸಾಹಿಸುವ ಇಂಥ ಲಾಬಿಗಳು ಬೇಸರ ಹುಟ್ಟಿಸುತ್ತೆ.
ಕೋಟಿಗಟ್ಟಲೆ ಖರ್ಚು ಮಾಡಿ, ಯಾವ angle ನಿಂದ್ಲೂ ಪ್ರಸ್ತುತ ಅನಿಸದ, ‘ಚಂದಮಾಮ’ದ ಅತಿರಂಜಿತ ಕಥೆಯಂಥ ಈ ಸಿನಿಮಾ ತಯಾರಿಸಿದ್ದು ಯಾವ ರೀತಿಯಲ್ಲಿ ‘ಅತ್ಯುತ್ತಮ’ ಅಂತ ನನಗಂತೂ ತಿಳೀತಿಲ್ಲ.
ಇನ್ನೂ ಅದೆಷ್ಟು ‘ಅತ್ಯುತ್ತಮ’ ಚಿತ್ರಗಳು ಕಾದಿವೆಯೋ !!
Why Baahubali, why not Visaaranai? A critic’s view of National Awards
ಚರಿತಾ ಒಪ್ಪಿದೆ ನಿಮ್ಮ ಮಾತನ್ನು.
ನಮ್ಮ ನಡುವಿನ ಚಲನಚಿತ್ರಗಳ ದಾರಿ ತಪ್ಪಿಸಲು ಇದಕ್ಕಿರುವ ಒಳ್ಳೆಯ ಉದಾಹರಣೆ ಬೇಕಾಗಿಲ್ಲ
ಬಾಹುಬಲಿಯಂಥಾ mediocre, masala potboiler ಚಿತ್ರ ನಮ್ಮ ದೇಶ ೨೦೧೫ರಲ್ಲಿ ತಯಾರಿಸಿದ ಅತ್ಯುತ್ತಮ ಚಿತ್ರವೇ?
ಇಂಥಾ ದರಿದ್ರ ಮನಸ್ತಿತಿಯಿರುವ ಜನರೇ ನಮ್ಮ ಪ್ರಸ್ತುತ ಎಲ್ಲ ಪ್ರಶಸ್ತಿ ಕಮಿಟಿಗಳಲ್ಲಿ , ಸೆನ್ಸಾರ್ ಬೋರ್ಡ್ಗಳಲ್ಲಿ, ಮಾಧ್ಯಮದಲ್ಲಿ ಕೂತಿರುವುದು.
ನಮ್ಮ ದೇಶ, ಸಾಂಸ್ಕೃತಿಕವಾಗಿ ದಿವಾಳಿ ಆಗದೆ ಇನ್ನೇನು?
ಥೂ..