ವಸಂತಕುಮಾರ್ ಕತಗಾಲ
ವಿಮಾನ ಏರಿದ್ದೇನೆ. ರೈಲು, ಕಾರು ಹೊಸದಲ್ಲ.
ಆದರೆ ಈ ಆಟೋದಲ್ಲಿ ಕುಳಿತಾಗ ಮಾತ್ರ ಹೖದಯ ತುಂಬಿ ಬಂತು.
ಪ್ರತಿದಿನ 40 ಕಿ.ಮೀ. ಸೈಕಲ್ ತುಳಿದು ಮನೆ ಮನೆಗೆ ಹೋಗಿ ಹಾಲು ಸಂಗ್ರಹಿಸಿ ಕೆಎಂಎಫ್ ಘಟಕ ಉಳಿಸಿಕೊಂಡ ಮೋಹನ ನಾಯ್ಕ ಅವರ ಸಾಹಸದ ಬಗ್ಗೆ ಕನ್ನಡಪ್ರಭದಲ್ಲಿ ವರದಿ ಮಾಡಿದಾಗ ಸ್ಥಳೀಯರು ನೆರವಿನ ಹಸ್ತ ಚಾಚಿದರು. ಆ ಸಹಾಯದಿಂದ ಮೋಹನ ನಾಯ್ಕ ಆಟೋ ಖರೀದಿಸಿದರು.
ಆ ಆಟೋ ಖರೀದಿಸಿದ ಖುಶಿಗೆ ನನ್ನನ್ನು ಆಟೋದಲ್ಲಿ ಕತಗಾಲ ತುಂಬೆಲ್ಲ ಸುತ್ತಾಡಿಸಿದರು.
ಬಡತನದಲ್ಲೆ ಬೆಳೆದು ಬದುಕಿಗಾಗಿ ಹೋರಾಡುತ್ತಿರುವ ಮೋಹನ ನಾಯ್ಕ ಈಗ ಆಟೋದಲ್ಲಿ ಹಾಲು ಸಂಗ್ರಹಿಸುತ್ತಿರುವುದು ಸಮಾಧಾನದ ಸಂಗತಿ.
ನಿಮ್ಮ ಸಾಮಾಜಿಕ ಕಳಕಳಿ, ಮೋಹನ ನಾಯ್ಕರವರ ಶ್ರಮದ ಬದುಕು ಓದಿ ಹೃದಯ ತುಂಬಿ ಬಂತು. ಅವರ ಬದುಕು ಹಸನಾಗಿರಲಿ!
thanks