ಯಲ್ಲಪ್ಪ ಹಂದ್ರಾಳ
ಪ್ರತಿವರ್ಷದಂತೆ “ಶವಸಂಸ್ಕಾರ”ಕ್ಕೆ ಅಣಿಯಾದೆವು!?
ಹೌಹಾರಿ ಹೋದಿರಾ..
ಮಕ್ಕಳಿಗೆ ತಮ್ಮಲ್ಲಿರುವ ಒಂದು ಕೆಟ್ಟ ಚಟವನ್ನು (ಬಿಡಲು ಸಾಧ್ಯವಾದ್ರೆ ಹೆಚ್ಚಿದ್ದರೂ) ಒಂದು ಹಾಳೆಯಲ್ಲಿ ಅವರಿಂದಲೇ ಬರೆಸಿ, ಸಹಿ ಹಾಕಿಸುತ್ತೇವೆ.
ನಂತರ ಆ ಚಟದ ಹಾಳೆಗಳ ರಾಶಿಯನ್ನು ಒಟ್ಟುಗೂಡಿಸಿ ಚಟ್ಟ ಕಟ್ಟಿ, ಊರ ತುಂಬಾ ಮೆರವಣಿಗೆ ಮಾಡುತ್ತೇವೆ
ಆಮೇಲೆ ಅದಕ್ಕಾಗಿಯೇ ತಯಾರು ಮಾಡಿದ ಸ್ಮಶಾನಕ್ಕೆ ತಂದು ಬೆಂಕಿ ಹಚ್ಚಿ ಸುಡುತ್ತೇವೆ
ಬೆಂಕಿ ಉರಿದಂತೆ ಮಕ್ಕಳ ಮುಖದಲ್ಲಿ ತಾವೆಲ್ಲರೂ ಆ ಚಟದಿಂದ ಮುಕ್ತರಾದರೇನೋ ಎನ್ನುವ ಭಾವ ಕುಣಿಯುತ್ತಿರುತ್ತದೆ.
ಹೌದು, ಇದು ಮಕ್ಕಳ ಮೇಲೆ ಪರಿಣಾಮ ಮಾಡುತ್ತದಾ ಎಂದು ನೀವು ಕೇಳಿದರೆ ನನ್ನ ಉತ್ತರ.. ಹೌದು.
ಸಂಸ್ಕಾರದ ಕೆಲವು ಫೋಟೋ ಹಾಕಿದ್ದೀನಿ. ನೋಡಿ..
0 ಪ್ರತಿಕ್ರಿಯೆಗಳು